ADVERTISEMENT

ಆಂಟಿಲಿಯಾ ಪ್ರಕರಣ: ನರೇಶ್ ಗೌರ್ ಜಾಮೀನು ತಡೆ ಆದೇಶ ರದ್ದುಪಡಿಸಿದ ಹೈಕೋರ್ಟ್

ಪಿಟಿಐ
Published 8 ಡಿಸೆಂಬರ್ 2021, 14:42 IST
Last Updated 8 ಡಿಸೆಂಬರ್ 2021, 14:42 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮುಂಬೈ:ಉದ್ಯಮಿ ಮುಕೇಶ್‌ ಅಂಬಾನಿ ಅವರ ನಿವಾಸ ‘ಆಂಟಿಲಿಯಾ’ ಬಳಿಯ ಸ್ಫೋಟಕ ಪತ್ತೆ ಪ್ರಕರಣದಲ್ಲಿನ ಆರೋಪಿ ಕ್ರಿಕೆಟ್ ಬುಕ್ಕಿ ನರೇಶ್ ಗೌರ್ ಅವರ ಜಾಮೀನಿಗೆ ತಡೆಯಾಜ್ಞೆ ನೀಡಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ತಮಗೆ ನೀಡಿರುವ ಜಾಮೀನಿಗೆ 25 ದಿನಗಳ ಕಾಲ ತಡೆ ನೀಡಿರುವ ವಿಶೇಷ ಎನ್‌ಐಎ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಗೌರ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಕೆ. ಶಿಂಧೆ ಅವರಿದ್ದ ಏಕಪೀಠವು ವಿಚಾರಣೆ ನಡೆಸಿ, ‘ತಮ್ಮ ಆದೇಶವನ್ನು ತಡೆಹಿಡಿಯುವ ಅಧಿಕಾರವನ್ನು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಹೊಂದಿಲ್ಲ’ ಎಂದು ತಿಳಿಸಿದೆ.

‘ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವನ್ನು ತಡೆಯಲು ಅಗತ್ಯವಿರುವಲ್ಲಿ ಜಾಮೀನು ಆದೇಶದ ಕಾರ್ಯಾಚರಣೆಯನ್ನು ಹೈಕೋರ್ಟ್ ಮಾತ್ರ ತಡೆಯಬಹುದು’ ಎಂದೂ ನ್ಯಾಯಮೂರ್ತಿ ಶಿಂಧೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.