ADVERTISEMENT

ಮದುವೆಗೆ ನಿರಾಕರಣೆ: ರೈಲು ಮುಂದೆ ಹಾರಿ ಯೋಧ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2018, 4:43 IST
Last Updated 1 ಆಗಸ್ಟ್ 2018, 4:43 IST
   

ಹೈದರಾಬಾದ್: ತನಗಿಷ್ಟವಾದ ಹುಡುಗಿಯನ್ನು ಮದುವೆಯಾಗಲು ಹುಡುಗಿಯ ಅಪ್ಪ ಸಮ್ಮತಿಸದೇ ಇದ್ದ ಕಾರಣ ಮನನೊಂದು ಯೋಧನೊಬ್ಬ ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಇಲ್ಲಿನ ಜೋಗುಲಂಬಾ ಗಜ್ವಾವ್ ಜಿಲ್ಲೆಯ ರಾವುಲ್‍ಪಲ್ಲಿ ಗ್ರಾಮ ನಿವಾಸಿಯಾದ ವಿನೋದ್ ಕುಮಾರ್ ಎಂಬ ಯೋಧ ಹತ್ತು ದಿನಗಳ ಹಿಂದೆ ಊರಿಗೆ ಬಂದಿದ್ದರು. ರಜೆಯಲ್ಲಿದ್ದ ಈತ ಹುಡುಗಿ ನೋಡಲು ಹೋಗಿ, ಆ ಹುಡುಗಿ ಒಪ್ಪಿಗೆಯೂ ಆಗಿತ್ತು,
ಆದರೆ ಹುಡುಗಿಯ ಅಪ್ಪನಿಗೆ ಈ ಸಂಬಂಧ ಇಷ್ಟ ಆಗಿರಲಿಲ್ಲ.

ಏತನ್ಮಧ್ಯೆ,ಅದೇ ಹುಡುಗಿಯನ್ನು ಮದುವೆಯಾಗಬೇಕೆಂದು ಪಟ್ಟು ಹಿಡಿದ ವಿನೋದ್ ಮಂಗಳವಾರ ಆತ್ಮಹತ್ಯೆ ಮಾಡಿದ್ದಾರೆ.

ADVERTISEMENT

ವಿನೋದ್ ಮೃತ ದೇಹ ಮಂಗಳವಾರ ಮುಂಜಾನೆ ರೈಲು ಹಳಿಯಲ್ಲಿ ಪತ್ತೆಯಾಗಿತ್ತು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.