ADVERTISEMENT

ಗುವಾಹಟಿ: ದೇಶ ತೊರೆಯಲು 15 ಬಾಂಗ್ಲಾದೇಶಿಯರಿಗೆ ನಾಗಾಂವ್ ಜಿಲ್ಲಾಡಳಿತ ಸೂಚನೆ

ಪಿಟಿಐ
Published 18 ಡಿಸೆಂಬರ್ 2025, 15:57 IST
Last Updated 18 ಡಿಸೆಂಬರ್ 2025, 15:57 IST
   

ಗುವಾಹಟಿ: ವಿದೇಶಿಯರ ನ್ಯಾಯಮಂಡಳಿಯು ‘ವಿದೇಶಿಯರು’ ಎಂದು ಘೋಷಿಸಿರುವ 15 ಬಾಂಗ್ಲಾದೇಶಿಯರು ಶುಕ್ರವಾರದೊಳಗೆ ಭಾರತ ತೊರೆಯಬೇಕು ಎಂದು ಅಸ್ಸಾಂನ ನಾಗಾಂವ್ ಜಿಲ್ಲಾಡಳಿತ ಗುರುವಾರ ಸೂಚಿಸಿದೆ.

ಈ ಕುರಿತು ಜಿಲ್ಲಾಧಿಕಾರಿ ದೇವಶಿಶ್ ಶರ್ಮಾ ಅವರು ಡಿ.17ರಂದು ಆದೇಶ ಹೊರಡಿಸಿದ್ದು, ಆದೇಶದ ಪ್ರತಿಗಳನ್ನು ಬಾಂಗ್ಲಾದೇಶಿಯರಿಗೆ ಗುರುವಾರ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘6 ಜನ ಮಹಿಳೆಯರು ಸೇರಿ 15 ಜನರು ಬಾಂಗ್ಲಾದೇಶದಿಂದ ಬಂದು, ಭಾರತದಲ್ಲಿ ಕಾನೂನುಬಾಹಿರವಾಗಿ ನೆಲಸಿದ್ದಾರೆ’ ಎಂದು ನ್ಯಾಯಮಂಡಳಿ ತನ್ನ ಆದೇಶದಲ್ಲಿ ಹೇಳಿದೆ.

ADVERTISEMENT