ಪಟ್ನಾ: ‘ರಾವಣ ದಹನ’ ಬದಲು, ಉಗ್ರರಾದ ಮಸೂದ್ ಅಜರ್ ಮತ್ತು ಹಫೀಸ್ ಸಯೀದ್ ಪ್ರತಿಕೃತಿ ದಹಿಸುವ ಮೂಲಕ ಇಲ್ಲಿ ಶುಕ್ರವಾರ ವಿಭಿನ್ನವಾಗಿ ಹೋಳಿ ಆಚರಿಸಲಾಯಿತು.
ಜೈಷ್–ಎ–ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಮುಂಬೈ ದಾಳಿ ರೂವಾರಿ ಹಫೀಸ್ ಸಯೀದ್ನ ಬೃಹತ್ ಪ್ರತಿಕೃತಿಗಳನ್ನುಇಲ್ಲಿನ ಕದಂ ಕೌನ್ನ ನವಲ್ ಕಿಶೋರ್ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು.
‘ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳನ್ನು ಭಾರತ ಮತ್ತು ಭಾರತದ ಜನ ಎಂದಿಗೂ ಸಹಿಸಲಾರರು. ಅದರ ಸಂಕೇತವಾಗಿ ಉಗ್ರರ ಪ್ರತಿಕೃತಿಗಳನ್ನು ಸುಡಲಾಯಿತು’ ಎಂದು ಸ್ಥಳೀಯರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.