ADVERTISEMENT

ಬಲೂನ್‌ ಸ್ಫೋಟ: ನಾಲ್ವರಿಗೆ ಗಾಯ

ಪಿಟಿಐ
Published 24 ನವೆಂಬರ್ 2018, 17:02 IST
Last Updated 24 ನವೆಂಬರ್ 2018, 17:02 IST

ಹೈದರಾಬಾದ್‌: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ನಾಯಕ ಕೆ.ಟಿ.ರಾಮಾರಾವ್‌ ಅವರ ರೋಡ್‌ ಶೋ ಪ್ರಾರಂಭವಾಗುವುದಕ್ಕೂ ಮುನ್ನ ಹೀಲಿಯಂ ಬಲೂನ್‌ಗಳು ಸ್ಫೋಟಗೊಂಡಿದ್ದರಿಂದ ನಾಲ್ವರಿಗೆ ಸುಟ್ಟ ಗಾಯಗಳಾಗಿವೆ.

ಉಪ್ಪಳದಲ್ಲಿ ಗುರುವಾರ ಸಂಜೆ ಈ ಅವಘಡ ಸಂಭವಿಸಿದೆ. ಟಿಆರ್‌ಎಸ್‌ ಬಂಬಲಿಗರು ಬಲೂನ್‌ಗಳನ್ನು ಹಾರಿಸಲು ಮುಂದಾದಾಗ ಬೆಂಕಿ ಹೊತ್ತಿಕೊಂಡಿದೆ.

ರಾವ್‌ ಅವರು ಉಸ್ತುವಾರಿ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದು, ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ರೋಡ್‌ ಶೋ ಆಯೋಜನೆಯಾಗಿತ್ತು.

ADVERTISEMENT

ವಾಹನದದಿಂದ ಕೆಳಗೆ ಬಿದ್ದ ಶಾ

ಅಶೋಕನಗರ, ಮಧ್ಯ ಪ್ರದೇಶ: ವಿಧಾನಸಭೆ ಚುನಾವಣೆ ರೋಡ್‌ ಶೋ ಮುಗಿಸಿ ವಾಹನದಿಂದ ಇಳಿಯುವಾಗ ಬಿಜೆಪಿ ಅಧ್ಯಕ್ಷ ಅಮಿತ್‌ ಶಾಕೆಳಗೆ ಬಿದ್ದ ಘಟನೆ ಶನಿವಾರ ನಡೆದಿದೆ.

ತಕ್ಷಣವೇ ಅಂಗರಕ್ಷಕ ಸಹಾಯಕ್ಕೆ ಬಂದಿದ್ದರಿಂದ ಶಾ ಅವರಿಗೆ ಯಾವುದೇ ಗಾಯಗಳಾಗಲಿಲ್ಲ. ನಂತರ ಶಿವಪುರಿ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.