ನವದೆಹಲಿ: ಭಾರತ್ ಬಂದ್ ಅಂಗವಾಗಿ ಪಂಜಾಬ್ ಮತ್ತು ಹರಿಯಾಣದ 32 ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಪ್ರತಿಭಟನಾಕಾರರು ಕುಳಿತಿದ್ದರಿಂದ ನಾಲ್ಕು ಶತಾಬ್ದಿ ರೈಲುಗಳ ಸಂಚಾರವನ್ನು ಶುಕ್ರವಾರ ರದ್ದುಪಡಿಸಲಾಗಿದೆ.
ಈ 32 ಸ್ಥಳಗಳು ದೆಹಲಿ, ಅಂಬಾಲಾ ಮತ್ತು ಫಿರೋಜಫುರ್ ರೈಲ್ವೆ ವಿಭಾಗಗಳ ವ್ಯಾಪ್ತಿಯಲ್ಲಿವೆ.
31 ಇತರ ರೈಲುಗಳ ಸಂಚಾರವನ್ನು ಸಹ ಪ್ರತಿಭಟನೆ ಕಾರಣಕ್ಕೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸಹಜ ಪರಿಸ್ಥಿತಿಗೆ ಮರಳಿದ ನಂತರ ರೈಲು ಸಂಚಾರ ಆರಂಭಿಸಲಾಗುವುದು ಎಂದು ಉತ್ತರ ರೈಲ್ವೆ ವಿಭಾದ ವಕ್ತಾರ ದೀಪಕ್ ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.