ADVERTISEMENT

ದೇಶದಲ್ಲಿ ಕೊರೊನಾವೈರಸ್ ಬಿಕ್ಕಟ್ಟಿಗೆ ಬಿಜೆಪಿ ಸರ್ಕಾರವೇ ಹೊಣೆ: ಕಮಲ್‌ನಾಥ್

ಪಿಟಿಐ
Published 12 ಏಪ್ರಿಲ್ 2020, 11:08 IST
Last Updated 12 ಏಪ್ರಿಲ್ 2020, 11:08 IST
ಕಮಲ್‌ನಾಥ್
ಕಮಲ್‌ನಾಥ್   

ನವದೆಹಲಿ: ಕೊರೊನಾವೈರಸ್‌ನಿಂದ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್‌ನ ಹಿರಿಯ ನೇತಾರ ಕಮಲ್‌ನಾಥ್ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ವಿಧಾನಸಭೆ ಕಾರ್ಯವೆಸಗಲಿ ಮತ್ತು ಅಲ್ಲಿದ್ದ ಕಾಂಗ್ರೆಸ್ ಸರ್ಕಾರ ಪತನವಾಗಲಿ ಎಂಬ ಏಕೈಕ ಉದ್ದೇಶದಿಂದ ಸಂಸತ್ ಕಲಾಪ ನಡೆದಿತ್ತು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲ್‌ನಾಥ್ ಹೇಳಿದ್ದಾರೆ.

ಮಧ್ಯಪ್ರದೇಶದ ಜನರನ್ನುಬಿಜೆಪಿಮೂರ್ಖರನ್ನಾಗಿ ಮಾಡಿದ್ದು, ಕೊರೊನಾವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಅಲ್ಲಿ ಆರೋಗ್ಯ ಸಚಿವರಾಗಲೀ, ಗೃಹ ಸಚಿವರಾಗಲೀ ಇಲ್ಲ. ಜಗತ್ತಿನಲ್ಲಿ ಎಲ್ಲಿಯೂ ಈ ರೀತಿ ಆಗಿರಲಿಕ್ಕಿಲ್ಲ

ADVERTISEMENT

ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೋಗದ ಪರೀಕ್ಷೆ ನಡೆಸಬೇಕಿದೆ. ಕೋವಿಡ್-19ನಿಂದಾಗಿ ದೇಶ ಆರ್ಥಿಕ ಕುಸಿತ ಅನುಭವಿಸಲಿದ್ದು, ಕೇಂದ್ರದ ಆರ್ಥಿಕ ಪ್ಯಾಕೇಜ್‌ಗಳತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಯಾವ ಕ್ಷೇತ್ರಕ್ಕೆ ಗಮನ ಹರಿಸಲಾಗುತ್ತದೆ ಮತ್ತು ಅದರ ಅನುಷ್ಠಾನ ಹೇಗೆ ಆಗುತ್ತದೆ ಎಂಬುದರ ಮೇಲೆ ಯಶಸ್ಸು ಅವಲಂಬಿತವಾಗಿದೆ ಎಂದಿದ್ದಾರೆ ಕಮಲ್‌ನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.