ADVERTISEMENT

ಬಿಜೆಪಿಯಿಂದ ಪ್ರಾದೇಶಿಕ ಪಕ್ಷಗಳಿಗೆ ಕುತ್ತು: ನಿತೀಶ್ ಬೆಂಬಲಕ್ಕೆ ಶರದ್ ಪವಾರ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:06 IST
Last Updated 11 ಆಗಸ್ಟ್ 2022, 4:06 IST
ಶರದ್ ಪವಾರ್
ಶರದ್ ಪವಾರ್   

ನವದೆಹಲಿ: ಪ್ರಾದೇಶಿಕ ಮಿತ್ರಪಕ್ಷಗಳನ್ನು ನಿಧಾನವಾಗಿ ಮುಗಿಸುವುದೇ ಬಿಜೆಪಿಯ ಉದ್ದೇಶವಾಗಿದೆ ಎಂದು ಆರೋಪಿಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಬಿಜೆಪಿ ಜೊತೆಗಿನ ಸಖ್ಯ ತೊರೆದು ಬಂದ ನಿತೀಶ್ ಕುಮಾರ್ ಅವರ ನಿಲುವನ್ನು ಬೆಂಬಲಿಸಿದ್ದಾರೆ.

‘ಬಿಜೆಪಿ ರೀತಿಯ ಸಿದ್ಧಾಂತ ಆಧರಿತ ಪಕ್ಷಗಳು ಭವಿಷ್ಯದಲ್ಲಿ ಉಳಿಯಲಿದ್ದು, ಕುಟುಂಬ ಆಧರಿತ ಪಕ್ಷಗಳು ನಿರ್ನಾಮವಾಗಲಿವೆ’ ಎಂಬುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇತ್ತೀಚೆಗೆ ಹೇಳಿದ್ದರು. ‘ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಅವು ಅಸ್ತಿತ್ವದಲ್ಲಿರಬಾರದು ಎಂಬುದು ಬಿಜೆಪಿ ಅಧ್ಯಕ್ಷರ ನಿಲುವು. ಅವರ ಪಕ್ಷ ಮಾತ್ರ ಉಳಿಯಬೇಕು ಎಂಬುದು ಅವರ ಉದ್ದೇಶವಾಗಿದೆ. ಇದರರ್ಥ ಪ್ರಾದೇಶಿಕ ಪಕ್ಷಗಳನ್ನು ನಿಧಾನವಾಗಿ ಮುಗಿಸುವುದು ಬಿಜೆಪಿ ಉದ್ದೇಶ. ನಿತೀಶ್ ಸಹ ಇದನ್ನೇ ಆರೋಪಿಸಿದ್ದರು’ ಎಂದು ಪವಾರ್ ಹೇಳಿದರು.

ಸ್ಪೀಕರ್‌ ವಿರುದ್ಧ ಅವಿಶ್ವಾಸ (ಪಟ್ನಾ ವರದಿ): ನೂತನ ಆಡಳಿತಾರೂಢ ಮಹಾಮೈತ್ರಿಯು ಬಿಹಾರ ವಿಧಾನಸಭೆ ಸ್ಪೀಕರ್ ವಿಜಯಕುಮಾರ್‌ ಸಿನ್ಹಾ ವಿರುದ್ಧ ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ ಎಂದು ಜೆಡಿಯುನ ಹಿರಿಯ ಮುಖಂಡ ತಿಳಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್ ಅವರು ಪ್ರಮಾಣ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಈ ನಿರ್ಣಯ ಕೈಗೊಳ್ಳಲಾಗಿದೆ. ಮಹಾಮೈತ್ರಿಯ ಅಂಗಪಕ್ಷಗಳ ಶಾಸಕರು ಸಹಿ ಮಾಡಿರುವ ನೋಟಿಸ್‌ಅನ್ನು ವಿಧಾನಸಭೆ ಸೆಕ್ರೆಟರಿಯೇಟ್‌ಗೆ ಸಲ್ಲಿಸಲಾಗಿದೆ ಎಂದೂ
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.