ADVERTISEMENT

ಮುಂಬೈ: ಸವದತ್ತಿ ಯಲ್ಲಮ್ಮ ಜಾತ್ರೆಗೆ ತೆರಳಿದ್ದ ಯಾತ್ರಿಕರು ಸುರಕ್ಷಿತವಾಗಿ ವಾಪಸ್‌

ಪಿಟಿಐ
Published 8 ಡಿಸೆಂಬರ್ 2022, 11:08 IST
Last Updated 8 ಡಿಸೆಂಬರ್ 2022, 11:08 IST
   

ಮುಂಬೈ: ಸವದತ್ತಿ ಯಲ್ಲಮ್ಮ ಜಾತ್ರೆಗೆ ಕರ್ನಾಟಕಕ್ಕೆ ಸುಮಾರು 7000 ಯಾತ್ರಿಕರನ್ನು ಕರೆದೊಯ್ದಿದ್ದ 145 ಬಸ್‌ಗಳು ಸುರಕ್ಷಿತವಾಗಿ ಮರಳಿವೆ ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತಿಳಿಸಿದೆ.

ಕೊಲ್ಹಾಪುರ ಭಾಗದಿಂದ ಈ ಯಾತ್ರಿಗಳು ಸೋಮವಾರ ಬಸ್‌ಗಳಲ್ಲಿ ತೆರಳಿದ್ದರು. ಗಡಿ ವಿವಾದದ ಹಿನ್ನೆಲೆಯಲ್ಲಿ ಸುರಕ್ಷತೆ ಕುರಿತು ಆತಂಕ ಉಂಟಾಗಿತ್ತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಉಭಯ ರಾಜ್ಯಗಳ ನಡುವಣ ಗಡಿ ವಿವಾದದ ಹಿನ್ನೆಲೆಯಲ್ಲಿ ಕೆಲ ಬಸ್‌ಗಳ ಮೇಲೆ ಕಲ್ಲು ತೂರಿದ, ಪುಣೆಯಲ್ಲಿ ಕರ್ನಾಟಕದ ನಾಲ್ಕು ಬಸ್‌ಗಳಿಗೆ ಮಸಿ ಬಳಿಯಲಾದ ಘಟನೆ ನಡೆದಿತ್ತು. ಗೊಂದಲ ಸ್ಥಿತಿಯಿಂದಾಗಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯು ಸುಮಾರು 382 ಬಸ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.