ADVERTISEMENT

ಬಿಎಸ್‌ಪಿ ಮುಖಂಡನ ಹತ್ಯೆ

ಪಿಟಿಐ
Published 29 ಜುಲೈ 2019, 19:03 IST
Last Updated 29 ಜುಲೈ 2019, 19:03 IST

ಜೈಪುರ:ದುಷ್ಕರ್ಮಿಗಳ ಗುಂಡಿಗೆ ರಾಜಸ್ಥಾನದಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖಂಡ ಬಲಿಯಾಗಿದ್ದಾರೆ.

ಜಸ್‌ರಾಮ್‌ ಗುರ್ಜರ್‌ (40) ಮೃತಪಟ್ಟವರು.ಜೈನ್‌ಪುರವಾಸ್‌ ಗ್ರಾಮದ ದೇವಾಲಯದ ಎದುರು ಸೋಮವಾರ ಹತ್ಯೆ ನಡೆದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದುಷ್ಕರ್ಮಿಗಳಿಗೆ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಸ್‌ರಾಮ್‌ ಅವರು2018ರ ವಿಧಾನಸಭಾ ಚುನಾವಣೆಯಲ್ಲಿ ಬೆಹ್ರೂರ್‌ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.