ADVERTISEMENT

Union Budget 2023 ದೇಶದ ಬಡವರ, ಮಧ್ಯಮ ವರ್ಗದವರ ಭರವಸೆ ಈಡೇರಿಸಿದೆ: ಪಟೇಲ್

ಪಿಟಿಐ
Published 1 ಫೆಬ್ರುವರಿ 2023, 12:22 IST
Last Updated 1 ಫೆಬ್ರುವರಿ 2023, 12:22 IST
ಭೂಪೇಂದ್ರ ಪಟೇಲ್ ಮತ್ತು ಪ್ರಧಾನಿ ಮೋದಿ
ಭೂಪೇಂದ್ರ ಪಟೇಲ್ ಮತ್ತು ಪ್ರಧಾನಿ ಮೋದಿ   

ಅಹಮದಾಬಾದ್: ಕೇಂದ್ರ ಬಜೆಟ್ ದೇಶದ ಬಡವರು, ವಂಚಿತರು ಮತ್ತು ಮಧ್ಯಮ ವರ್ಗದವರ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಭರವಸೆ ಮತ್ತು ನಿರೀಕ್ಷೆಗಳನ್ನು ಈಡೇರಿಸುತ್ತದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಈ ಬಜೆಟ್ “ಸಾಕಾರಗೊಳಿಸಿದೆ” ಎಂದಿದ್ದಾರೆ

ಸರ್ಕಾರಕ್ಕೆ ಮಾರ್ಗದರ್ಶನ ನೀಡಬಲ್ಲ ಸಪ್ತರ್ಷಿ ಎಂಬ ಏಳು ಪ್ರಮುಖ ಕ್ಷೇತ್ರಗಳ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಅವುಗಳಲ್ಲಿ ಸಮಗ್ರ ಅಭಿವೃದ್ದಿ, ಅಂತಿಮ ಗುರಿ ತಲುಪುವುದು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮರ್ಥ್ಯ ಅನ್ವೇಷಣೆ, ಹಸಿರು ಅಭಿವೃದ್ದಿ, ಯುವ ಶಕ್ತಿ, ಹಣಕಾಸು ವಲಯಗಳನ್ನು ಒಳಗೊಂಡಿದೆ. ’ಈ ಬಜೆಟ್ ಭಾರತದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ’ ಎಂದು ಪಟೇಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.