ADVERTISEMENT

ರಾಜಸ್ಥಾನ ಮಾಜಿ CM ವಸುಂಧರಾ ರಾಜೇ ಬೆಂಗಾವಲು ವಾಹನ ಪಲ್ಟಿ: ಪೊಲೀಸರಿಗೆ ಗಾಯ

ಪಿಟಿಐ
Published 22 ಡಿಸೆಂಬರ್ 2024, 12:39 IST
Last Updated 22 ಡಿಸೆಂಬರ್ 2024, 12:39 IST
<div class="paragraphs"><p>ವಸುಂಧರಾ ರಾಜೇ</p></div>

ವಸುಂಧರಾ ರಾಜೇ

   

ಪಿಟಿಐ

ಜೈಪುರ: ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಬೆಂಗಾವಲು ವಾಹನ ಪಲ್ಟಿಯಾದ ಪರಿಣಾಮ ಮೂವರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ADVERTISEMENT

ಮಾಜಿ ಸಚಿವ ಓಟರಾಮ್ ದೇವಾಸಿ ಅವರನ್ನು ಭೇಟಿ ಮಾಡಲು ವಸುಂಧರಾ ರಾಜೇ ಅವರು ರಸ್ತೆ ಮಾರ್ಗವಾಗಿ ಪಾಲಿ ಜಿಲ್ಲೆಯ ಮುಂಡರ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ ಅಡ್ಡಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೆಂಗಾವಲು ವಾಹನ ಪಲ್ಟಿಯಾಗಿದೆ ಎಂದು ಪಾಲಿ ಪೊಲೀಸ್ ವರಿಷ್ಠಾಧಿಕಾರಿ ಚುನಾರಾಮ್ ಜತ್ ತಿಳಿಸಿದ್ದಾರೆ.

ಬೆಂಗಾವಲು ವಾಹನದಲ್ಲಿ ಏಳು ಮಂದಿ ಪೊಲೀಸರು ಪ್ರಯಾಣಿಸುತ್ತಿದ್ದರು. ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.