ADVERTISEMENT

ಹಗರಣದಲ್ಲಿ ನನ್ನನ್ನು ಸಿಲುಕಿಸುವ ಯತ್ನ: ಸಿಸೋಡಿಯಾ

ಪಿಟಿಐ
Published 15 ಜನವರಿ 2023, 22:17 IST
Last Updated 15 ಜನವರಿ 2023, 22:17 IST
ಮನೀಷ್ ಸಿಸೋಡಿಯಾ 
ಮನೀಷ್ ಸಿಸೋಡಿಯಾ    

ನವದೆಹಲಿ: ‘ನನ್ನ ಮೇಲೆ ಹಗೆತನ ಸಾಧಿಸುತ್ತಿರುವ ಸಿಬಿಐ, ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಭಾನುವಾರ ದೂರಿದ್ದಾರೆ.

‘ಸಿಬಿಐ ಅಧಿಕಾರಿಗಳು ನನಗೆ ಸೇರಿದ ಕಂಪ್ಯೂಟರ್‌ ಜಪ್ತಿ ಮಾಡಿದ್ದು, ಅದರಲ್ಲಿ ಸಂಗ್ರಹಿಸಿಡಲಾಗಿರುವ ದಾಖಲೆಗಳನ್ನು ತಿರುಚುವ, ಅಳಿಸಿಹಾಕುವ ಸಾಧ್ಯತೆ ಇದೆ’ ಎಂದಿದ್ದಾರೆ.

ಸಿಸೋಡಿಯಾ ಆರೋಪವನ್ನು ತಳ್ಳಿ ಹಾಕಿರುವ ಸಿಬಿಐ, ನಾವು ಕಾನೂನಿನ ಪ್ರಕಾರವೇ ಶೋಧ ಕಾರ್ಯ ನಡೆಸಿದ್ದೇವೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.