ADVERTISEMENT

ನೆಲಸಿದ ಕ್ಷೇತ್ರದಲ್ಲಷ್ಟೇ ಮತದಾನ ನೋಂದಣಿಗೆ ಅರ್ಹ: ಮುಖ್ಯ ಚುನಾವಣಾ ಆಯುಕ್ತ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಸ್ಪಷ್ಟನೆ

ಪಿಟಿಐ
Published 1 ಜುಲೈ 2025, 14:38 IST
Last Updated 1 ಜುಲೈ 2025, 14:38 IST
ಗ್ಯಾನೇಶ್‌ ಕುಮಾರ್‌–ಪಿಟಿಐ ಚಿತ್ರ
ಗ್ಯಾನೇಶ್‌ ಕುಮಾರ್‌–ಪಿಟಿಐ ಚಿತ್ರ   

ನವದೆಹಲಿ: ‘ಅರ್ಹ ನಾಗರಿಕರು ಸಾಮಾನ್ಯ ನಿವಾಸಿಗಳಾಗಿದ್ದರೆ ತಾವು ನೆಲಸಿದ ಕ್ಷೇತ್ರದಲ್ಲಿ ಮಾತ್ರ ಮತದಾರರ ಪಟ್ಟಿಯಲ್ಲಿ ಸ್ವಯಂ ನೋಂದಣಿ ಮಾಡಿಸಿಕೊಳ್ಳಬೇಕೇ ಹೊರತು ಸ್ವಂತ ಮನೆಯಿರುವ ಜಾಗದಲ್ಲಿ ಅಲ್ಲ’ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ತಿಳಿಸಿದ್ದಾರೆ.

ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು ಮತದಾರರ ಪಟ್ಟಿಯ ‘ವಿಶೇಷ ಪರಿಶೀಲನಾ’ ಕಾರ್ಯದಲ್ಲಿ ತೊಡಗಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.

ಹಲವು ಜನರು ಗೊತ್ತಿದ್ದೋ, ಗೊತ್ತಿಲ್ಲದೆಯೋ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಮತದಾರರಾಗಿದ್ದಾರೆ. ಅಂತಹವರನ್ನು ಪತ್ತೆಹಚ್ಚಲು ಆಯೋಗವು ವಿಶೇಷ ಅಭಿಯಾನಕ್ಕೆ ಮುಂದಾಗಿದೆ.

ADVERTISEMENT

ಬೂತ್‌ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜನಪ್ರತಿನಿಧಿ ಕಾಯ್ದೆ ಪ್ರಕಾರ, ಒಬ್ಬ ಮತದಾರನು ಸಾಮಾನ್ಯ ನಾಗರಿಕರಾಗಿದ್ದರೆ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಮತದಾರರಾಗಿರಲು ಅವಕಾಶವಿದೆ. ವ್ಯಕ್ತಿಯು ದೆಹಲಿಯಲ್ಲಿ ನೆಲಸಿದ್ದು, ಪಾಟ್ನಾದಲ್ಲಿ ಮನೆ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ದೆಹಲಿಯಲ್ಲಿ ಮಾತ್ರ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.