ADVERTISEMENT

ಸಂಸತ್ ಕಲಾಪ: ರಾಜನಾಥ್ ಹೇಳಿಕೆ ಬಳಿಕ ಹೊರನಡೆದ ಕಾಂಗ್ರೆಸ್‌ ಸಂಸದರು

ಏಜೆನ್ಸೀಸ್
Published 15 ಸೆಪ್ಟೆಂಬರ್ 2020, 13:01 IST
Last Updated 15 ಸೆಪ್ಟೆಂಬರ್ 2020, 13:01 IST
ಅಧಿರ್ ರಂಜನ್ ಚೌಧರಿ – ಎಎನ್‌ಐ ಚಿತ್ರ
ಅಧಿರ್ ರಂಜನ್ ಚೌಧರಿ – ಎಎನ್‌ಐ ಚಿತ್ರ   

ನವದೆಹಲಿ: ಚೀನಾ ಜತೆಗಿನ ಗಡಿ ಸಮಸ್ಯೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಮಾತನಾಡಿದ ಬಳಿಕ ಕಾಂಗ್ರೆಸ್‌ ಸಂಸದರು ಕಲಾಪದಿಂದ ಹೊರ ನಡೆದಿದ್ದಾರೆ.

‘ನಮ್ಮ ನಾಯಕ ಅಧಿರ್ ರಂಜನ್ ಚೌಧರಿ ಅವರು ಭದ್ರತಾ ಪಡೆಗಳಿಗೆ ಬೆಂಬಲದ ಸಂದೇಶ ಸಾರಲು ಹಾಗೂ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂಬ ಎಚ್ಚರಿಕೆಯನ್ನು ಚೀನಾಕ್ಕೆ ರವಾನಿಸಲು ಬಯಸಿದ್ದರು. ಆದರೆ, ತಾನು ಮಾತ್ರ ಸೇನೆಗೆ ಬೆಂಬಲದ ಮಾತುಗಳನ್ನಾಡಬಹುದು ಎಂದು ಸರ್ಕಾರ ಭಾವಿಸಿದಂತಿದೆ’ ಎಂದು ಕಾಂಗ್ರೆಸ್‌ ನಾಯಕ ಗೌರವ್ ಗೊಗೊಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಭಾರತ ಮತ್ತು ಚೀನಾ ಗಡಿ ಸಮಸ್ಯೆ ಬಗೆಹರಿಯದೆ ಉಳಿದಿದೆ. ಪ್ರಸ್ತುತ ಗಡಿಯನ್ನು ಚೀನಾ ಒಪ್ಪುವುದಿಲ್ಲ ಎಂದು ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.