ಲಖನೌ:ಕೋವಿಡ್–19 ಭೀತಿ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿರುವುದರಿಂದ ವಿದೇಶದಲ್ಲಿರುವ ವರನಿಗೆ ದೇಶಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ, ನಿಗದಿಯಾಗಿದ್ದ ದಿನವೇ ವಿಡಿಯೊ ಕಾಲ್ ಮೂಲಕ ವಧುವನ್ನು ವರಿಸಿರುವಪ್ರಸಂಗ ಉತ್ತರ ಪ್ರದೇಶದ ಶಹಜಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಮಾರಿಷಸ್ನಲ್ಲಿ ಎಂಜಿನಿಯರ್ ಆಗಿರುವ ತೌಸಿಫ್ ಖಾನ್ ಅವರ ವಿವಾಹ ಪರ್ವೀನ್ ಅವರೊಂದಿಗೆ ನಿಗದಿಯಾಗಿತ್ತು.
ವಿಮಾನ ಹಾರಾಟ ಸ್ತಬ್ಧಗೊಂಡಿರುವುದರಿಂದ ಮದುವೆ ದಿನ ವರನಿಗೆ ದೇಶಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ, ಮದುವೆಗೆ ಅಗತ್ಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲದೇ ಸಂಬಂಧಿಕರಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿತ್ತು. ಹಾಗಾಗಿ, ನಿಗದಿಯಾಗಿದ್ದ ದಿನವೇ ಮದುವೆ ಕಾರ್ಯ ನೆರವೇರಿಸಲು ಎರಡು ಕುಟುಂಬದವರು ನಿಶ್ಚಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.