ADVERTISEMENT

ಕೊರೊನಾ ವೈರಸ್‌ ಆತಂಕ| ಮಾ. 31ರ ವರೆಗೆ ಸಂಪೂರ್ಣ ಸ್ತಬ್ಧವಾಗಲಿದೆ ಪಂಜಾಬ್‌

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 6:47 IST
Last Updated 22 ಮಾರ್ಚ್ 2020, 6:47 IST
   

ಅಮೃತಸರ: ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯುವ ಕ್ರಮವಾಗಿ ಪಂಜಾಬ್‌ ಅನ್ನು ಸಂಪೂರ್ಣ ಸ್ತಬ್ಧಗೊಳಿಸಲು ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ನಿರ್ಧರಿಸಿದ್ದಾರೆ.

ಈ ವೇಳೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಲಭ್ಯತೆಯಲ್ಲಿ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲೂ ಸೂಚಿಸಲಾಗಿದೆ.

ಸರ್ಕಾರಿ ಸೇವೆಗಳು, ಜೀವನಾವಶ್ಯಕ ಪರಿಕಗಳನ್ನು ಮಾರಾಟ ಮಾಡುವ ಅಂಗಡಿಗಳು ನಿಷೇಧಾಜ್ಞೆಯ ವೇಳೆಯೂ ತೆರೆದಿರಲಿವೆ.

ADVERTISEMENT

ನಿಷೇಧಾಜ್ಞೆ ಜಾರಿ ಹೊಣೆಯನ್ನು ಡಿಸಿಗಳು ಮತ್ತು ಎಸ್‌ಎಸ್‌ಪಿಎಸ್‌ಗಳ ಹೆಗಲಿಗೆ ಹೊರಿಸಿದ್ದಾರೆ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.