ಭೋಪಾಲ್ : ಮಧ್ಯಪ್ರದೇಶದ ವಲಸೆ ಕಾರ್ಮಿಕ ರಾಮು ಹೈದರಾಬಾದ್ನಿಂದ ಪಯಣ ಆರಂಭಿಸಿದ್ದು ಗರ್ಭಿಣಿ ಪತ್ನಿ ಧನವಂತಾ ಮತ್ತು ಪುಟ್ಟ ಮಗು ಅನುರಾಗಿಣಿ ಜತೆ. ಲಾಕ್ಡೌನ್ ಕಾರಣ ಊರಿಗೆ ಹೋಗಲು ಯಾವುದೇ ವಾಹನಸಿಗಲಿಲ್ಲ.ಹಾಗಾಗಿ ತನ್ನ ಪತ್ನಿಯನ್ನು ಮರದ ಹಲಗೆ ಮತ್ತು ಕಟ್ಟಿಗೆಯಿಂದ ಮಾಡಿದ ಗಾಡಿಯೊಂದರಲ್ಲಿ ಕೂರಿಸಿ ರಸ್ತೆಯಲ್ಲಿ ಆ ಗಾಡಿ ಎಳೆದುಕೊಂಡು ಹೋಗಿದ್ದಾನೆ.
ರಾಮು ತನ್ನ ಪತ್ನಿ ಮತ್ತು 2 ವರ್ಷದಮಗುವನ್ನು ಗಾಡಿಯಲ್ಲಿ ಕೂರಿಸಿಕೊಂಡು ಎಳೆದೊಯ್ಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ಅಂದಹಾಗೆರಾಮು ಮತ್ತು ಕುಟುಂಬ ಮಂಗಳವಾರ ಬಲಘಾಟ್ ಜಿಲ್ಲೆಗೆ ತಲುಪಿದೆ.
ನನ್ನ ಮಗಳನ್ನು ಹೊತ್ತು ನಡೆಯಲು ಪ್ರಯತ್ನಿಸಿದ್ದೆ. ಆದರೆ ಗರ್ಭಿಣಿ ಪತ್ನಿಗೆ ನಡೆಯುವುದು ಕಷ್ಟವಾಗಿತ್ತು.ಹಾಗಾಗಿ ನಾನು ಕಟ್ಟಿಗೆಯಿಂದ ಗಾಡಿಯೊಂದನ್ನು ತಯಾರಿಸಿ ಬಲಘಾಟ್ವರೆಗೆ ಎಳೆದುಕೊಂಡು ಬಂದೆ.ಊಟ ತಿಂಡಿ ಏನೂ ಮಾಡಿಲ್ಲ ಎಂದು ರಾಮು ಹೇಳಿದ್ದಾರೆ.
ಮಹಾರಾಷ್ಟ್ರಕ್ಕೆ ತಲುಪಿದಾಗ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ನಿತೇಶ್ ಭಾರ್ಗವ ಅವರ ನೇತೃತ್ವದ ಪೊಲೀಸರು ಆಹಾರ ನೀಡಿದ್ದಾರೆ. ಅವರೇ ಚಪ್ಪಲಿ ಕೂಡಾ ಕೊಟ್ಟರು.ಅಲ್ಲಿಂದ ನಮ್ಮನ್ನು ಬಲಘಾಟ್ಗೆ ವಾಹನದಲ್ಲಿ ಕಳಿಸಿಕೊಟ್ಟರು ಅಂತಾರೆ ರಾಮು
ಈ ಕುಟುಂಬವನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ14 ದಿನ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಲಾಗಿದೆ ಎಂದು ಭಾರ್ಗವ ಹೇಳಿದ್ದಾರೆ.
ಘಟನೆ- 2
ಮಧ್ಯಪ್ರದೇಶ ಮೂಲದ ವಲಸೆ ಕಾರ್ಮಿಕರೊಬ್ಬರು ಎತ್ತಿನ ಗಾಡಿಯಲ್ಲಿ ಸಹೋದರ ಮತ್ತು ಅತ್ತೆಯನ್ನು ಕರೆದೊಯ್ಯುತ್ತಿರುವ ವಿಡಿಯೊ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಂದೇ ಒಂದು ಎತ್ತು ಗಾಡಿಯನ್ನೆಳೆಯುತ್ತಿದ್ದು ಅದರ ಜತೆ ಆ ಯುವಕ ಹೆಗಲು ನೀಡಿದ್ದಾರೆ.ನಾವು ಬೆಳಗ್ಗೆ ಮಹೌನಿಂದ ಹೊರಟಿದ್ದು ಪತ್ತಾರ್ ಮುಂಡ್ಲಾ ಗ್ರಾಮಕ್ಕೆ ತಲುಪಬೇಕಿದೆ. ಲಾಕ್ಡೌನ್ನಿಂದಾಗಿ ಯಾವುದೇ ವಾಹನ ಸಿಗದೇ ಇದ್ದಾಗ ಎತ್ತಿನ ಗಾಡಿಯಲ್ಲಿ ಪಯಣ ಆರಂಭಿಸಿದೆವು. ಇಂದೋರ್ ಜಿಲ್ಲೆಯ ಮಹೌ ಈತನ ಗ್ರಾಮದಿಂದ ಸುಮಾರು 25 ಕಿಮೀ ದೂರದಲ್ಲಿದೆ.
ಘಟನೆ-3
ವಲಸೆ ಕಾರ್ಮಿಕರ ಕುಟುಂಬವೊಂದು ರಸ್ತೆಯಲ್ಲಿನಡೆದು ಹೋಗುತ್ತಿದ್ದು, ಪುಟ್ಟ ಬಾಲಕನೊಬ್ಬ ಸೂಟ್ಕೇಸ್ ಮೇಲೆ ಮಲಗಿ ಆ ಸೂಟ್ಕೇಸ್ನ್ನು ಮಹಿಳೆಯೊಬ್ಬರು ಎಳೆದೊಯ್ಯುತ್ತಿರುವ ದೃಶ್ಯ ಟ್ವಿಟರ್ನಲ್ಲಿ ವೈರಲ್ ಆಗಿದೆ.
ಘಟನೆ-4
ಬಿಹಾರದ ಕತಿಹಾರ್ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಬಿಸ್ಕೆಟ್ ಪ್ಯಾಕೆಟ್ಗಾಗಿ ಮುಗಿಬೀಳುತ್ತಿರುವ ದೃಶ್ಯವೂ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಆ ವಿಡಿಯೊಗಳು ಲಾಕ್ಡೌನ್ ಹೊತ್ತಲ್ಲಿ ವಲಸೆ ಕಾರ್ಮಿಕರು ಊರಿಗೆ ಮರಳಲು ಅನುಭವಿಸುತ್ತಿರುವ ಕಷ್ಟಗಳನ್ನು ತೋರಿಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.