ADVERTISEMENT

ತನಿಖೆ: ದೌರ್ಜನ್ಯ ಆರೋಪ ಪರಿಗಣಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 18:01 IST
Last Updated 2 ಅಕ್ಟೋಬರ್ 2020, 18:01 IST
   

ನವದೆಹಲಿ: ‘ತೆಲಂಗಾಣದ ಬಿಎಚ್‌ಇಎಲ್‌ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿಯಾಗಿದ್ದ ಮಹಿಳೆಯ ಸಾವಿನ ತನಿಖೆಯಲ್ಲಿ, ಆಕೆಯ ಮೇಲೆ ನಡೆದಿದೆ ಎನ್ನಲಾದ ‘ಲೈಂಗಿಕ ದೌರ್ಜನ್ಯದ’ ಆರೋಪವನ್ನೂ ಪರಿಗಣಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತಲಂಗಾಣ ಪೊಲೀಸರಿಗೆ ಸೂಚಿಸಿದೆ.

2009ರಲ್ಲಿ ಸಂಸ್ಥೆಯನ್ನು ಸೇರಿದ್ದ ಮಹಿಳೆಯು, 2019ರ ಅ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಮಗಳು ಬರೆದಿಟ್ಟ ಪತ್ರದಲ್ಲಿ ಮತ್ತು ಕೊನೆಯ ಬಾರಿ ಸಹೋದರಿಯ ಜತೆ ನಡೆಸಿದ ಸಂಭಾಷಣೆಯಲ್ಲಿ ತಾನು ಮೇಲಧಿಕಾರಿಯಿಂದ ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದುದು ಸ್ಪಷ್ಟವಾಗಿದೆ. ಸಂಸ್ಥೆಯಲ್ಲಿ ಆಕೆಗೆ ಮಾನಸಿಕ ಹಿಂಸೆಯನ್ನೂ ನೀಡಲಾಗುತ್ತಿತ್ತು’ ಎಂದು ಆಕೆಯ ತಾಯಿ ಆರೋಪಿಸಿದ್ದರು.

ಆದರೆ, ತೆಲಂಗಾಣ ಪೊಲೀಸರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ, ಆರೋಪಿ ಅಧಿಕಾರಿಗೆ ಕ್ಲೀನ್‌ಚಿಟ್‌ ನೀಡಿದ್ದರು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.