ADVERTISEMENT

ಉದ್ಯಮಿ ನವನೀತ್ ಕಲ್ರಾಗೆ ಜಾಮೀನು

ಪಿಟಿಐ
Published 29 ಮೇ 2021, 12:39 IST
Last Updated 29 ಮೇ 2021, 12:39 IST
ನವನೀತ್‌ ಕಾಲ್ರಾ ಅವರನ್ನು ಕೋರ್ಟ್‌ ಹಾಜರುಪಡಿಸಲು ಕರೆದೊಯ್ಯುತ್ತಿರುವುದು
ನವನೀತ್‌ ಕಾಲ್ರಾ ಅವರನ್ನು ಕೋರ್ಟ್‌ ಹಾಜರುಪಡಿಸಲು ಕರೆದೊಯ್ಯುತ್ತಿರುವುದು   

ನವದೆಹಲಿ: ಇ‌ಲ್ಲಿನ ಖಾನ್‌ ಚಾಚಾ ರೆಸ್ಟೋರಂಟ್‌ನಲ್ಲಿ ಆಮ್ಲಜನಕ ಸಿಲಿಂಡರ್‌ ಜಪ್ತಿ ಮಾಡಿದ್ದ ಪ್ರಕರಣದ ಸಂಬಂಧ ಉದ್ಯಮಿ ನವನೀತ್ ಕಲ್ರಾ ಅವರಿಗೆ ದೆಹಲಿ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.

ಚೀಫ್‌ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ ಅರುಣ್‌ ಕುಮಾರ್ ಗರ್ಗ್ ಅವರು, ಈ ಅವಧಿಯಲ್ಲಿ ತಮ್ಮಿಂದ ಆಮ್ಲಜನಕ ಸಿಲಿಂಡರ್ ಖರೀದಿಸಿದ್ದ ಗ್ರಾಹಕರನ್ನು ಭೇಟಿಯಾಗಬಾರದು, ಸಾಕ್ಷ್ಯ ನಾಶಪಡಿಸಲು, ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಬಾರದು, ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿತು.

ಇತ್ತೀಚೆಗೆ ನಡೆದ ದಾಳಿಯಲ್ಲಿ ಕಲ್ರಾ ಅವರ ಮಾಲೀಕತ್ವದ ಖಾನ್ ಚಾಚಾ, ಟೌನ್‌ಹಾಲ್‌ ಮತ್ತು ನೆಗೆ ಅಂಡ್‌ ಜು ರೆಸ್ಟೋರಂಟ್‌ಗಳ ಮೇಲೆ ದಾಳಿ ನಡೆಸಿ ಪೊಲೀಸರು 524 ಆಮ್ಲಜನಕ ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದರು. ಇವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ದಾಸ್ತಾನು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.