ನವದೆಹಲಿ: ದೇಶದಲ್ಲಿ ಕೋವಿಡ್–19ಗೆ ತುತ್ತಾಗಿದ್ದವರಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಏರಿಕೆ ಆಗಿದೆ. ಶೇ 25ಕ್ಕೂ
ಹೆಚ್ಚು ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಇದೇ ವೇಳೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವ ಅವಧಿಯೂ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
* ಕೋವಿಡ್ಗೆ ಒಳಗಾದವರಲ್ಲಿ ಶೇ 25.13ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಎರಡು ವಾರದ ಹಿಂದೆ ಈ ಪ್ರಮಾಣ
ಶೇ 13ರಷ್ಟು ಇತ್ತು.
* ತಮಿಳುನಾಡಿನಲ್ಲಿ ಶೇ 56.75 ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಶೇ 39.58ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ.
* ಸರಕುಗಳ ಅಂತರ ರಾಜ್ಯ ಸಾಗಾಟಕ್ಕೆ ಪಾಸ್ಗಳ ಅಗತ್ಯ ಇಲ್ಲ. ಲಾರಿಗಳಿಗೆ ಪಾಸ್ ಬೇಕಿಲ್ಲ, ಚಾಲಕರ ಚಾಲನಾ ಪರವಾನಗಿಯೇ ಸಾಕು ಎಂದು ಕೇಂದ್ರ ಸರ್ಕಾರ ಹೇಳಿದೆ* ವಿವಿಧೆಡೆ ಸಿಲುಕಿಕೊಂಡಿರುವ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರರನ್ನು ಊರಿಗೆ ಕಳುಹಿಸಲು ಬಸ್ಗಳನ್ನು ಮಾತ್ರ ಬಳಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.