ADVERTISEMENT

ಜಾನುವಾರು ಕಳ್ಳನೆಂದು ಶಂಕಿಸಿ ವ್ಯಕ್ತಿ ಹತ್ಯೆ

ಪಿಟಿಐ
Published 3 ಮೇ 2019, 20:25 IST
Last Updated 3 ಮೇ 2019, 20:25 IST

ಅರರಿಯಾ: ಜಾನುವಾರು ಕಳ್ಳನೆಂದು ಶಂಕಿಸಿ, ಗುಂಪೊಂದು ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ರಾಬರ್ಟ್ಸ್‌ಗಂಜ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಡಾಕ್‌ ಹರಿಪುರ ಗ್ರಾಮದಲ್ಲಿ ಗುಂಪು ನಡೆಸಿದ ದಾಳಿಯಿಂದ ಮಹೇಶ್‌ ಯಾದವ್ (44) ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಇಬ್ಬರು ಸಹಚರರೊಂದಿಗೆ ಸೇರಿ ಜಾನುವಾರನ್ನು ಕದ್ದೊಯ್ಯಲು ಬಂದಾಗ ಮಹೇಶ್‌ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಡಾಕ್‌ ಹರಿಪುರದ ನೆರೆಯ ಗ್ರಾಮದ ವಾಸಿಯಾಗಿದ್ದ ಮಹೇಶ್‌, ಈ ಹಿಂದೆಯೂ ಜಾನುವಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಗುಂಪು ದಾಳಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.