‘ತೌತೆ’ ಚಂಡಮಾರುತದ ಪ್ರಭಾವ ರಾಜ್ಯದಲ್ಲಿ ಸೋಮವಾರ ತಗ್ಗಿದೆ. ಅತ್ತ ಮಹಾರಾಷ್ಟ್ರ, ಗೋವಾ ಹಾಗೂ ಗುಜರಾತ್ ರಾಜ್ಯಗಳಲ್ಲಿ ಗಾಳಿ, ಮಳೆಯ ಅಬ್ಬರ ಜೋರಾಗಿತ್ತು. ಇದರಿಂದ ಅಪಾರ ನಾಶನಷ್ಟ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಕರಾವಳಿ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸುತ್ತಿದೆ. ಚಿತ್ರಕೃಪೆ: (ಪಿಟಿಐ, ಎಎಫ್ಪಿ, ರಾಯಿಟರ್ಸ್)
ಪ್ರಜಾವಾಣಿ ವಾರ್ತೆ
Published 17 ಮೇ 2021, 16:04 IST
Last Updated 17 ಮೇ 2021, 16:04 IST
ಮುಂಬೈನಲ್ಲಿ 'ಗೇಟ್ ವೇ ಆಫ್ ಇಂಡಿಯಾ' ಸಮೀಪ ಬಂದಪ್ಪಳಿಸಿದ ಸಮುದ್ರ ಅಲೆಗಳು
ಚಂಡಮಾರುತದ ಪ್ರಭಾವದಿಂದಾಗಿ ಪ್ರಬಲ ಅಲೆಗಳು ಅಪ್ಪಳಿಸಿವೆ.
ಕೇರಳದ ಕಲ್ಲಿಕೋಟೆಯ ವೆಲ್ಲಾಯಿಲ್ ಬಂದರಿನಲ್ಲಿ ಕಂಡುಬಂದ ದೃಶ್ಯ - ಆಕಾಶವನ್ನು ಆವರಿಸಿದ ಮೋಡಗಳು
ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಮಾರ್ಗದಲ್ಲಿ ಕಂಡುಬಂದ ದೃಶ್ಯ
ಮುಂಬೈ ಕರಾವಳಿಯಲ್ಲಿ ಪ್ರಕ್ಷುಬ್ಧಗೊಂಡ ಸಮುದ್ರ
ಪ್ರಯಾಣಿಕ ಬಸ್ಗಳು ನೀರಿನಿಂದ ತುಂಬಿದ ರಸ್ತೆಯಲ್ಲಿ ಸಿಲುಕಿದೆ.
ತೀವ್ರ ಮಳೆಯ ನಡುವೆಯೂ ಸಾರ್ವಜನಿಕರಿಗೆ ನೆರವಾಗುತ್ತಿರುವ ಪೊಲೀಸರು
ಮುಂಬೈನಲ್ಲಿ ಗಾಳಿ ಮಳೆಗೆ ಧರೆಗುಳಿದ ಮರ - ಕಾರು ಸಂಪೂರ್ಣ ಜಖಂ
ರಸ್ತೆ ಬದಿಯಲ್ಲಿದ್ದ ಕಾರಿನ ಮೇಲೆ ಮರ ಬಿದ್ದಿದೆ.
ಮುಂಬೈ ಕರಾವಳಿ ತೀರ ಪ್ರದೇಶದ ದೃಶ್ಯ
ನೀರು ತುಂಬಿದ ರಸ್ತೆಗಳಲ್ಲಿ ವಾಹನಗಳ ಸಂಚಾರ
ಗೋವಾದಲ್ಲಿ 15 ಮೀನುಗಾರರ ರಕ್ಷಣೆ
ಮೀನುಗಾರಿಕೆ ದೋಣಿಗಳನ್ನು ಲಂಗರು ಹಾಕಲಾಗಿದೆ.
ಗೋವಾ ಕರಾವಳಿಯಲ್ಲಿ ಸಾರ್ವಜನಿಕರನ್ನು ಎಚ್ಚರಿಸುತ್ತಿರುವ ಎನ್ಡಿಆರ್ಎಫ್ ಪಡೆ