ಅಜಿತ್ ಪವಾರ್ ಎನ್ಸಿಪಿ ಪಕ್ಷದ ನಾಯಕ
ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ ) ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು(ಶನಿವಾರ) ಬಿಡುಗಡೆ ಮಾಡಿದೆ.
ದೆಹಲಿ ಕಾಂಗ್ರೆಸ್ ಮುಖಂಡ ದೇವೇಂದ್ರ ಯಾದವ್ ವಿರುದ್ಧ ಮುಲಾಯಂ ಸಿಂಗ್ ಅವರನ್ನು ಕಣಕ್ಕೆ ಇಳಿಸಿದೆ. ಬುರಾರಿಯಿಂದ ರತನ್ ತ್ಯಾಗಿ, ಚಾಂದಿನಿ ಚೌಕ್ನಿಂದ ಖಾಲಿದ್ ಉರ್ ರೆಹಮಾನ್, ಬಲ್ಲಿಮಾರನ್ನಿಂದ ಮೊಹಮ್ಮದ್ ಹರುನ್ ಮತ್ತು ಓಖ್ಲಾದಿಂದ ಇಮ್ರಾನ್ ಸೈಫಿ ಅವರನ್ನು ಪಕ್ಷ ಕಣಕ್ಕಿಳಿಸಿದೆ.
ಛತ್ತರ್ಪುರದಿಂದ ನರೇಂದ್ರ ತನ್ವಾರ್, ಲಕ್ಷ್ಮಿ ನಗರದಿಂದ ನಮಹಾ, ಗೋಕುಲಪುರಿಯಿಂದ ಜಗದೀಶ್ ಭಗತ್, ಮಂಗೋಲ್ಪುರಿಯಿಂದ ಖೇಮ್ ಚಂದ್, ಸೀಮಾಪುರಿಯಿಂದ ರಾಜೇಶ್ ಲೋಹಿಯಾ, ಸಂಗಮ್ ವಿಹಾರ್ನಿಂದ ಕಮರ್ ಅಹ್ಮದ್ ಅವರನ್ನು ಕಣಕ್ಕಿಳಿಸಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2025ರ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಆಡಳಿತರೂಢ ಎಎಪಿ ಎಲ್ಲಾ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್ 47 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.