ADVERTISEMENT

ತಿರುಪತಿ ದೇಗುಲಕ್ಕೆ ಅಖಂಡ ಬೆಳ್ಳಿ ದೀಪ ನೀಡಿದ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ

ಪಿಟಿಐ
Published 19 ಮೇ 2025, 16:22 IST
Last Updated 19 ಮೇ 2025, 16:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುಪತಿ: ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಅವರು ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ಎರಡು ಬೆಳ್ಳಿಯ ದೀಪಗಳನ್ನು ಸೋಮವಾರ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿ ದೀಪ 50 ಕೆ.ಜಿ ತೂಕವಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ತಿಳಿಸಿದೆ.

ಇವು ಗರ್ಭಗುಡಿಯಲ್ಲಿ ಇರಿಸುವ ಸಾಂಪ್ರದಾಯಿಕ ದೀಪಗಳಾಗಿದ್ದು, ಟಿಟಿಡಿ ಅಧ್ಯಕ್ಷ ಬಿ.ಆರ್‌.ನಾಯ್ಡು ಅವರ ಸಮ್ಮುಖದಲ್ಲಿ ಪ್ರಮೋದಾ ದೇವಿ ಅವರು ದೀಪಗಳನ್ನು ನೀಡಿದ್ದಾರೆ. 300 ವರ್ಷಗಳ ಹಿಂದೆ ಮೈಸೂರು ರಾಜರು ಕೂಡ ದೀಪಗಳನ್ನು ಕೊಡುಗೆಯಾಗಿ ನೀಡಿದ್ದರು ಎಂದು ಟಿಟಿಡಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT