ADVERTISEMENT

ದಿಗ್ವಿಜಯ್ ಸಿಂಗ್‌ರದ್ದು ತಾಲಿಬಾನಿ ಮಾನಸಿಕತೆ: ಶಿವರಾಜ್ ಸಿಂಗ್ ಚೌಹಾಣ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2021, 5:29 IST
Last Updated 23 ಜೂನ್ 2021, 5:29 IST
ಶಿವರಾಜ್ ಸಿಂಗ್ ಚೌಹಾಣ್ (ಪಿಟಿಐ ಚಿತ್ರ)
ಶಿವರಾಜ್ ಸಿಂಗ್ ಚೌಹಾಣ್ (ಪಿಟಿಐ ಚಿತ್ರ)   

ಭೋಪಾಲ್: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್‌ರದ್ದು ತಾಲಿಬಾನಿ ಮಾನಸಿಕತೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟೀಕಿಸಿದ್ದಾರೆ.

ದಿಗ್ವಿಜಯ್ ವಿರುದ್ಧ ಚೌಹಾಣ್ ಟೀಕೆ ಮಾಡಿರುವುದನ್ನು ‘ಎಎನ್‌ಐ’ ಟ್ವೀಟ್ ಮಾಡಿದೆ.

‘ತಾಲಿಬಾನ್ ನಾಯಕರನ್ನು ಭೇಟಿಯಾಗಲು ಭಾರತದ ಅಧಿಕಾರಿಗಳು ರಹಸ್ಯವಾಗಿ ತೆರಳಿದ್ದರು’ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಇತ್ತೀಚೆಗೆ ಟ್ವೀಟ್ ಮಾಡಿದ್ದ ದಿಗ್ವಿಜಯ್ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ADVERTISEMENT

‘ಇದು ತುಂಬಾ ಗಂಭೀರವಾದ ವಿಷಯ. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕು. ಬಿಜೆಪಿ ಐಟಿ ಸೆಲ್ ಇದನ್ನು ದೇಶದ್ರೋಹದ ಎಂದು ಪರಿಗಣಿಸುತ್ತದೆಯೇ?’ ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದರು.

ಇದಕ್ಕೆ ಶಿವರಾಜ್ ಸಿಂಗ್ ಅವರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.