ADVERTISEMENT

ಡಿಕೆಶಿ ಉದ್ದೇಶವೇ ಬೇರೆ ಇದೆ, ಮುಂದೆ ಗೊತ್ತಾಗುತ್ತೆ: ಬಿಜೆಪಿ ನಾಯಕ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 6:08 IST
Last Updated 13 ಜುಲೈ 2019, 6:08 IST
   

ಬೆಂಗಳೂರು:ಬಿಜೆಪಿಗೆ ರಿವರ್ಸ್‌ ಆಪರೇಷನ್ ಭೀತಿಯಿಲ್ಲ. ರಾಜ್ಯವನ್ನು ಕತ್ತಲಕೋಣೆಯಲ್ಲಿ ಇಟ್ಟಿರುವ ಮೈತ್ರಿ ನಾಯಕರಿಗೆ ಮುಂದೇನಾಗುತ್ತೆ ಎನ್ನುವ ಹೆದರಿಕೆ ಇದೆ’ ಎಂದು ಬಿಜೆಪಿ ನಾಯಕ ವಿ.ಸೋಮಣ್ಣ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಅವರು, ‘ನಾವು ಒಂದೆಡೆ ಸೇರಿ ಕುಶಲೋಪರಿ ಮಾತಾಡಿಕೊಳ್ತಿದ್ದೀವಿ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ರಾಜ್ಯ ರಾಜಕಾರಣದ ಎಲ್ಲ ಗೊಂದಲಗಳಿಗೆ ಮಂಗಳವಾರ ಅಂಕಿತ ಬೀಳುತ್ತೆ’ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.

‘ರಾಜ್ಯದಲ್ಲಿಭೀಕರ ಬರಗಾಲ ಇದೆ. ಕುಮಾರಸ್ವಾಮಿ ಅವರಿಗೆ ಅದರ ಕಾಳಜಿ ಇರಬೇಕಿತ್ತು. ಆದರೆ ಅವರುಮಾತು ಮತ್ತುನಡವಳಿಕೆಗೆ ತಾಳಮೇಳವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕೀಯ ಬದುಕಿನಲ್ಲಿಇಂಥ ದಗಲ್‌ಬಾಜಿತನವನ್ನು ನೋಡಿರಲೇ ಇಲ್ಲ. ಬೀದಿಬೀದಿಗಳಲ್ಲಿ ಕಿತ್ತಾಡಿಕೊಂಡಿದ್ದಾರೆ. ನಾವೇನೂ ಮಾಡಬೇಕಿಲ್ಲ, ಇವರೇ ಕೊರಳಪಟ್ಟಿ ಹಿಡಿದು ಹೊಡೆದಾಡಿಕೊಂಡು ದೂರಾಗ್ತಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಡಿ.ಕೆ.ಶಿವಕುಮಾರ್ ಒನ್‌ ಮೆನ್ ಆರ್ಮಿ ಥರ ಮುನ್ನುಗ್ಗುತ್ತಿದ್ದಾರೆ. ನಾನು ಈವರೆಗೆ ನೋಡಿದ್ದ ಡಿಕೆಶಿನೇ ಬೇರೆ, ಈಗ ಕಾಣಿಸುತ್ತಿರುವ ಡಿಕೆಶಿನೇ ಬೇರೆ. ಅಧಿಕಾರಕ್ಕಾಗಿ ಅವರು ಇಷ್ಟೆಲ್ಲಾ ಮಾಡ್ತಿದ್ದಾರೆ. ಎಲ್ಲಿಗೆ ಹೋದರೂ ಜೊತೆಗೆ ಕ್ಯಾಮೆರಾದವರನ್ನು ಕರೆದುಕೊಂಡು ಹೋಗಿ, ತಾನು ಮಾಡಿದ್ದನ್ನೆಲ್ಲಾ ರೆಕಾರ್ಡ್ ಮಾಡಿಸಿ, ಯಾರಿಗೆ ಕಳಿಸಬೇಕೋ ಕಳಿಸ್ತಾ ಇದ್ದಾರೆ’ ಎಂದು ಮೈತ್ರಿ ಸರ್ಕಾರ ಉಳಿಸುವ ಡಿ.ಕೆ.ಶಿವಕುಮಾರ್ ಪ್ರಯತ್ನವನ್ನು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.