ನವದೆಹಲಿ:ಐಎನ್ಎಕ್ಸ್ ಮೀಡಿಯಾದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿಕೇಂದ್ರದ ಮಾಜಿ ಹಣಕಾಸು ಸಚಿವಪಿ.ಚಿದಂಬರಂಅವರನ್ನು ವಿಚಾರಣೆಗೆ ಒಳಪಡಿಸಲುಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಬುಧವಾರ ಬೆಳಿಗ್ಗೆ ತಿಹಾರ್ ಜೈಲು ತಲುಪಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪಿಯಾಗಿರುವ ಚಿದಂಬರಂ ಅವರನ್ನು ಈಗಾಗಲೇಸಿಬಿಐ ಬಂಧಿಸಿದ್ದು ಅಕ್ಟೋಬರ್ 17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇ.ಡಿ ಕೂಡ ಅವರ ವಿಚಾರಣೆಗೆ ನ್ಯಾಯಾಲಯದ ಅನುಮತಿ ಕೋರಿತ್ತು. ಇ.ಡಿ ಮನವಿಯನ್ನು ಮಂಗಳವಾರ ಪುರಸ್ಕರಿಸಿದ್ದ ದೆಹಲಿಯ ವಿಶೇಷ ನ್ಯಾಯಾಲಯ,ತಿಹಾರ್ ಜೈಲಿನಲ್ಲಿಯೇ ಅಧಿಕಾರಿಗಳು ಅವರ ವಿಚಾರಣೆ ನಡೆಸಬಹುದು. ಅಗತ್ಯವೆನಿಸಿದರೆ ಅವರನ್ನು ಬಂಧಿಸಬಹುದು ಎಂದು ಹೇಳಿತ್ತು.
ಇದನ್ನೂ ಓದಿ:ಚಿದಂಬರಂ, ಕಾರ್ತಿ ಹಾಗೂ ಐಎನ್ಎಕ್ಸ್: ಏನಿದು ಹಗರಣ?
ಈ ಮಧ್ಯೆ, ಇ.ಡಿ ವಿಚಾರಣೆಯ ಹಿನ್ನೆಲೆಯಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮತ್ತು ಪತ್ನಿ ನಳಿನಿ ಚಿದಂಬರಂ ಸಹ ತಿಹಾರ್ ಜೈಲು ತಲುಪಿದ್ದಾರೆ.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.