ADVERTISEMENT

‌ಅಸ್ಸಾಂ: ಮನಸ್ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ಆನೆಗಳ ಕಳೇಬರ ಪತ್ತೆ

ಪಿಟಿಐ
Published 3 ಮೇ 2025, 6:23 IST
Last Updated 3 ಮೇ 2025, 6:23 IST
<div class="paragraphs"><p>ಆನೆ (ಸಾಂದರ್ಭಿಕ ಚಿತ್ರ)</p></div>

ಆನೆ (ಸಾಂದರ್ಭಿಕ ಚಿತ್ರ)

   

ಕೊಕ್ರಜಾರ್: ಭಾರತ–ಭೂತಾನ್ ಗಡಿ ಸಮೀ‍ಪ ಇರುವ ಮನಸ್ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ಕಾಡಾನೆಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗುವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.‌

ಉದ್ಯಾನದ ಪಶ್ಚಿಮ ಭಾಗದ ಪನ್‌ಬರಿ ವಲಯದ ಪಲೆಂಗ್‌ಶಿ ಬೀಟ್‌ ಪ್ರದೇಶದಲ್ಲಿ ಶುಕ್ರವಾರ ತಿರುಗಾಡುತ್ತಿದ್ದ ವೇಳೆ ಅರಣ್ಯ ರಕ್ಷಕರಿಗೆ ಆನೆಗಳ ಕಳೇಬರ ಕಣ್ಣಿಗೆ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳ್ಳಬೇಟೆಗಾರರು ಕೃತ್ಯ ಎಸಗಿರುವ ಶಂಕೆ ಇದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಆನೆಗಳ ಅಂತಿಮ ಸಂಸ್ಕಾರ ಮಾಡುವುದಕ್ಕೂ ಮೊದಲು ಮರಣೋತ್ತರ ಪರೀಕ್ಷೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.