ADVERTISEMENT

ಮುಂಬೈ: ಅರ್ನಾಬ್‌ ಗೋಸ್ವಾಮಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್‌

ಪಿಟಿಐ
Published 14 ಡಿಸೆಂಬರ್ 2022, 14:28 IST
Last Updated 14 ಡಿಸೆಂಬರ್ 2022, 14:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ಹಾಗೂ ರಿಪಬ್ಲಿಕ್‌ ಟಿವಿ ಒಡೆತನದ ಎಆರ್‌ಜಿ ಮೀಡಿಯಾ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌ ಅವರು ಬುಧವಾರ ಹಿಂಪಡೆದಿದ್ದಾರೆ.‌

ಮೊಕದ್ದಮೆ ಹಿಂಪಡೆಯುವಿಕೆಗೆ ಸಮ್ಮತಿಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವಿ.ಡಿ. ಕೇದಾರ್‌ ಅವರು, ಪರಮ್ ಅವರಿಗೆ ಸಾಂಕೇತಿಕವಾಗಿ ₹ 1,500 ದಂಡ ವಿಧಿಸಿದ್ದಾರೆ. ಈ ಹಣವನ್ನು ಅರ್ನಾಬ್‌ ಅವರಿಗೆ ಪಾವತಿಸಲಾಗುತ್ತದೆ.

ತಮ್ಮ ಮಾನಹಾನಿ ಮಾಡಿದ ಆರೋಪದ ಮೇಲೆ ಪರಮ್‌ ಅವರು 2021ರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು ಹಾಗೂ ಪರಿಹಾರವಾಗಿ ₹ 90 ಲಕ್ಷ ಕೋರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.