ಮುಂಬಯಿ: ಎನ್ಸಿಪಿ ಮುಖ್ಯಸ್ಥ ಶರಾದ್ ಪವಾರ್ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರರಾದ, ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆ ಹಾಗೂ ಅವರ ಸಹೋದರ ನಿಲೇಶ್ ರಾಣೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಎನ್ಸಿಪಿ ಕಾರ್ಯಕರ್ತ ಶ್ರೀನಿವಾಸ್ ಅಲಿಯಾಸ್ ವೆಂಕಟರಾವ್ ಚವನ್ ಎಂಬುವವರು ದೂರು ನೀಡಿದ್ದು, ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣೆ ಸಹೋದರರು ಶರಾದ್ ಪವಾರ್ ವಿರುದ್ಧ ಮಾತನಾಡುವ ಕೆಲವು ವಿಡಿಯೊ ತುಣುಕುಗಳನ್ನು ಚವನ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಾರಾಷ್ಟ್ರದ ಸಚಿವ ಮತ್ತು ಎನ್ಸಿಪಿ ಮುಖ್ಯ ವಕ್ತಾರನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದರೂ ಅವರ ರಾಜೀನಾಮೆಯನ್ನು ಪವಾರ್ ಯಾಕೆ ಪಡೆದಿಲ್ಲ ಎಂದು ಪ್ರಶ್ನಿಸಿರುವ ನಿತೇಶ್ ರಾಣೆ, 'ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಜೊತೆ ಶರದ್ ಪವಾರ್ ಅವರಿಗೆ ಸಂಬಂಧ ಇರಬಹುದು' ಎಂದು ಆರೋಪಿಸಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ.
ಮಾಜಿ ಸಂಸದ ನಿಲೇಶ್ ರಾಣೆ ಅವರು ಅಂತಹದ್ದೇ ಆರೋಪಗಳನ್ನು ಟ್ವಿಟರ್ನಲ್ಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.