ADVERTISEMENT

ದುಷ್ಕರ್ಮಿಗಳಿಂದ ತಿರುನಲ್ವೇಲಿ ಮಾಜಿ ಮೇಯರ್ ಕುಟುಂಬದ ಹತ್ಯೆ 

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 14:47 IST
Last Updated 23 ಜುಲೈ 2019, 14:47 IST
ಕೃಪೆ: ಟ್ವಿಟರ್
ಕೃಪೆ: ಟ್ವಿಟರ್   

ತಿರುನಲ್ವೇಲಿ: ತಿರುನಲ್ವೇಲಿ ಮಾಜಿ ಮೇಯರ್, ಡಿಎಂಕೆ ನಾಯಕಿ ಉಮಾ ಮಹೇಶ್ವರಿ,ಅವರ ಪತಿ ಮತ್ತು ಮನೆಯ ಕೆಲಸದಾಕೆ ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ. ತಮಿಳುನಾಡಿದ ತಿರುನಲ್ವೇಲಿ ಜಿಲ್ಲೆಯ ರೆಡ್ಡಿಯಾರ್‌ಪಟ್ಟಿ ನಗರದ ಬಳಿಯಿರುವ ಉಮಾ ಅವರ ನಿವಾಸದಲ್ಲಿ ಈ ಕೃತ್ಯ ನಡೆದಿದೆ.

ಮಂಗಳವಾರ ಸಂಜೆ ಈ ಕೃತ್ಯ ನಡೆದಿದ್ದು ತಿರುನಲ್ವೇಲಿ ಜಿಲ್ಲಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹತ್ಯೆ ರಾಜಕೀಯ ಪ್ರೇರಿತ ಆಗಿರಲಿಕ್ಕಿಲ್ಲ ಎಂದು ಪ್ರಾಥಮಿಕ ವರದಿಗಳಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT