ADVERTISEMENT

ಇಮ್ರಾನ್‌ ಖಾನ್‌ ಬಸ್ಮಾಸುರನಂತೆ ಕಾಣುತ್ತಿದ್ದಾರೆ: ಸಚಿವ ಗಿರಿರಾಜ್‌ ಸಿಂಗ್‌

ಪಿಟಿಐ
Published 28 ಆಗಸ್ಟ್ 2019, 16:41 IST
Last Updated 28 ಆಗಸ್ಟ್ 2019, 16:41 IST
ಗಿರಿರಾಜ್‌ ಸಿಂಗ್
ಗಿರಿರಾಜ್‌ ಸಿಂಗ್   

ಪಟ್ನಾ: ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಪುರಾಣಗಳಲ್ಲಿ ಬರುವ ಭಸ್ಮಾಸುರನಂತೆ ಕಾಣುತ್ತಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ವ್ಯಂಗ್ಯವಾಡಿದ್ದಾರೆ.

ಪರಮಾಣು ಅಸ್ತ್ರದೊಂದಿಗೆ ಯುದ್ಧದ ಕುರಿತು ಮಾತನಾಡುತ್ತಿರುವ ಇಮ್ರಾನ್‌ ಖಾನ್‌ ಕೂಡಾ ಭಸ್ಮಾಸುರನಂತೆ ಭಸ್ಮವಾಗಬೇಕಾಗುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಸಲಹೆ ಮೇರೆಗೆ ಇಮ್ರಾನ್‌ ಖಾನ್‌ ಅವರು ಬಡತನ, ಅನಕ್ಷರತೆ, ನಿರುದ್ಯೋಗ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ಅವರು ಸಲಹೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.