ADVERTISEMENT

‘ಗೀತಂ’ ಸಂಸ್ಥಾಪಕ ಮೂರ್ತಿ ನಿಧನ

ಏಜೆನ್ಸೀಸ್
Published 3 ಅಕ್ಟೋಬರ್ 2018, 18:10 IST
Last Updated 3 ಅಕ್ಟೋಬರ್ 2018, 18:10 IST
ಡಾ.ಎಂ.ವಿ.ವಿ.ಎಸ್‌. ಮೂರ್ತಿ
ಡಾ.ಎಂ.ವಿ.ವಿ.ಎಸ್‌. ಮೂರ್ತಿ   

ಅಮರಾವತಿ: ತೆಲುಗು ದೇಶಂ ಪಕ್ಷದ ನಾಯಕ, ಆಂಧ್ರಪ್ರದೇಶ ವಿಧಾನಪರಿಷತ್‌ ಸದಸ್ಯ ಡಾ. ಎಂ.ವಿ.ವಿ.ಎಸ್‌. ಮೂರ್ತಿ(76) ಅಮೆರಿಕದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಅಲಸ್ಕಾ ಸಮೀಪದ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ.

ಅ.6ರಂದು ನಡೆಯಲಿದ್ದ ‘ಗೀತಂ’ ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿದ್ದರು. ವಿಶಾಖಪಟ್ಟಣ ಬಳಿಯ ರುಶಿಕೊಂಡಾದಲ್ಲಿ ಗಾಂಧಿ ತಂತ್ರಜ್ಞಾನ ಮತ್ತು ನಿರ್ವಹಣೆ ಸಂಸ್ಥೆ (ಗೀತಂ) ಸ್ಥಾಪಿಸಿದ್ದರು. ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ಕ್ಯಾಂಪಸ್‌ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.