ನವದೆಹಲಿ: ಕೊರೊನಾ ವೈರಸ್ನಿಂದಾಗಿ ನಲುಗಿರುವ ಚೀನಾದಿಂದ 112 ಮಂದಿ ಭಾರತೀಯರು ಹಾಗೂ 36 ಮಂದಿ ವಿದೇಶಿಯರನ್ನು ಹೊತ್ತು ತಂದ ಭಾರತೀಯ ವಾಯು ಸೇನೆಯ ವಿಮಾನ ಗ್ಲೋಬ್ ಮಾಸ್ಟರ್ ಗುರುವಾರ ಬೆಳಗಿನ ಜಾವ ದೆಹಲಿ ತಲುಪಿದೆ.
ಬೆಳಿಗ್ಗೆ 6.45ಕ್ಕೆ ವಿಮಾನ ದೆಹಲಿ ತಲುಪಿದೆ.ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ ಉಸ್ತುವಾರಿಯಲ್ಲಿ 148 ಮಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಬೆಳಿಗ್ಗೆದೆಹಲಿಯ ಚಾವ್ಲಾ ಪ್ರದೇಶದಲ್ಲಿರುವ ಕೊರೊನಾ ವೈರಸ್ ತಪಾಸಣಾ ಕೇಂದ್ರದಲ್ಲಿ ಎಲ್ಲಾ ರೀತಿಯ ತಪಾಸಣೆಗೆ ಒಳಪಡಿಸಲಾಗುವುದು ಎಂದು ಭಾರತ-ಟಿಬೆಟ್ ಗಡಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಜಪಾನಿನ ಹಡಗಿನಲ್ಲಿ ಸಿಲುಕಿದ್ದ 119 ಮಂದಿ ಭಾರತೀಯರು ಸ್ವದೇಶಕ್ಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.