ADVERTISEMENT

ಮಹದಾಯಿ ನದಿ ವಿವಾದ: ಮುಖ್ಯಮಂತ್ರಿ ಬೆಂಬಲಿಸುವಂತೆ ಗೋವಾ ಸಚಿವರಿಂದ ಮನವಿ

ಪಿಟಿಐ
Published 26 ಜನವರಿ 2023, 16:04 IST
Last Updated 26 ಜನವರಿ 2023, 16:04 IST
ಮಹದಾಯಿ ನದಿ
ಮಹದಾಯಿ ನದಿ    

ಪಣಜಿ: ಮಹದಾಯಿ ನದಿ ಹೋರಾಟ ಕುರಿತಂತೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ಗೆ ಪ್ರಜೆಗಳು ಬೆಂಬಲ ನೀಡಬೇಕು ಗೋವಾ ಸರ್ಕಾರದ ಇಬ್ಬರು ಸಚಿವರು ಗುರುವಾರ ಹೇಳಿದ್ದಾರೆ.

ಗೋವಾ ಸಮ್ಮಿಶ್ರ ಸರ್ಕಾರದ ಕ್ರೀಡಾ ಸಚಿವ ಗೋವಿಂದ್ ಗೌಡೆ, ಪ್ರವಾಸೋದ್ಯಮ ಸಚಿವ ರೋಹನ್‌ ಖೌಂಟೆ ಅವರು ಗೋವಾ ಜನರಲ್ಲಿ ಈ ಮನವಿ ಮಾಡಿದ್ದಾರೆ.

ಕರ್ನಾಟಕ ಮತ್ತು ಗೋವಾ ನಡುವಿನ ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದ ತೀವ್ರಗೊಂಡ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಮಹದಾಯಿ ನದಿಯನ್ನು ಉಳಿಸಲು ಗೋವಾದ ಜನರು ಒಗ್ಗೂಡಬೇಕು, ಎಲ್ಲರೂ ಮುಖ್ಯಮಂತ್ರಿ ಅವರನ್ನು ಬೆಂಬಲಿಸಬೇಕು ಎಂದು ಗೋವಿಂದ್ ಗೌಡೆ ಹೇಳಿದ್ದಾರೆ.

ಗೋವಾದ ಜನರಿಗೆ ಮಹಾದಾಯಿ ನದಿ ತಾಯಿ ಇದ್ದಂತೆ, ಅದರ ಉಳಿವಿಗಾಗಿ ಹೋರಾಡಲು ನಾವೆಲ್ಲರೂ ಒಗ್ಗೂಡಬೇಕು. ಯಾರಾದರೂ ಸಂವಿಧಾನವನ್ನು ಪಾಲಿಸದಿದ್ದರೆ ಅವರ ವಿರುದ್ಧ ದಂಗೆ ಏಳಬೇಕಾಗುತ್ತದೆ ಎಂದು ಸಚಿವ ರೋಹನ್‌ ಖೌಂಟೆ ಹೇಳಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ರಾಜ್ಯದ ಹಿತಾಸಕ್ತಿಗಾಗಿ ಮುಖ್ಯಮತ್ರಿ ಅವರನ್ನು ಎಲ್ಲರೂ ಬೆಂಬಲಿಸಬೇಕು ಎಮದು ಸಚಿವ ರೋಹನ್‌ ಖೌಂಟೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.