ADVERTISEMENT

ಗುಜರಾತ್‌: ಬಣ್ಣದೋಕುಳಿ ಆಡಿ ಸ್ನಾನಕ್ಕೆ ಹೋಗಿದ್ದ ಐವರು ನೀರುಪಾಲು

ಪಿಟಿಐ
Published 18 ಮಾರ್ಚ್ 2022, 15:38 IST
Last Updated 18 ಮಾರ್ಚ್ 2022, 15:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದ್ವಾರಕ: ಹೋಳಿ ಸಂಭ್ರಮ ಮುಗಿಸಿ ಸ್ನಾನಕ್ಕೆ ಹೋಗಿದ್ದ ಐವರು ಹದಿಹರೆಯದ ಬಾಲಕರು ನದಿಯಲ್ಲಿ ಮುಳುಗಿ ಸಾವಿಗೀಡಾಗಿರುವ ದುರಂತ ಘಟನೆ ಗುಜರಾತ್‌ನ ದೇವಭೂಮಿ ದ್ವಾರಕ ಜಿಲ್ಲೆಯ ಭನ್ವಾಡ್ ಬಳಿ ನಡೆದಿದೆ.

ಹೋಳಿಹಬ್ಬದ ಪ್ರಯುಕ್ತ ಶುಕ್ರವಾರ ಬಣ್ಣದೋಕುಳಿ ಆಡಿದ್ದ ಯುವಕರು ಬಳಿಕ ಸ್ನಾನಕ್ಕೆಂದು ಇಲ್ಲಿನ ತ್ರಿವೇಣಿ ನದಿಗೆ ಹೋಗಿದ್ದರು. ಆದರೆ ನದಿಯ ಆಳದ ಬಗ್ಗೆ ಗೊತ್ತಿಲ್ಲದೆ ಯುವಕರು ಈಜಲಾಗದೆ ಮುಳುಗಿದ್ದಾರೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನಿಂದ ನದಿಯಲ್ಲಿ ಮುಳುಗಿದ್ದ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಭನ್ವಾಡ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ನಿಕುಂಜ್ ಜೋಶಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT