ADVERTISEMENT

ಆಮ್ಲಜನಕ ಸಾಗಿಸುತ್ತಿದ್ದ ವಾಹನವನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ: ಹರಿಯಾಣ ಸಚಿವ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 10:29 IST
Last Updated 23 ಏಪ್ರಿಲ್ 2021, 10:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಂಡಿಗಡ: ಪಾಣಿಪತ್‌ನಿಂದ ಹರಿಯಾಣದ ಸಿರ್ಸಾಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಸಾಗಿಸುತ್ತಿದ್ದ ಟ್ಯಾಂಕರ್‌ ವಾಹನವೊಂದು ಶುಕ್ರವಾರ ನಾಪತ್ತೆಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಔಷಧ ನಿಯಂತ್ರಕರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪಾಣಿಪತ್ ಪೊಲೀಸರು ತಿಳಿಸಿದ್ದಾರೆ.

ದೆಹಲಿ ಸರ್ಕಾರದಿಂದ ಲೂಟಿ–ಆರೋಪ:ಪಾಣಿಪತ್‌ನಿಂದ ಫರಿದಾಬಾದ್‌ ಕೋವಿಡ್‌ ಆಸ್ಪತ್ರೆಗಳಿಗೆ ಆಮ್ಲಜನಕ ಸಾಗಿಸುತ್ತಿದ್ದ ವಾಹನವನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ ಎಂದು ಹರಿಯಾಣದ ಗೃಹ ಮತ್ತು ಆರೋಗ್ಯ ಖಾತೆ ಸಚಿವ ಅನಿಲ್ ವಿಜ್‌ ಆರೋಪಿಸಿದ್ದಾರೆ.

ADVERTISEMENT

ಪಾಣಿಪತ್‌ನಿಂದ ಹೊರಟ ಆಮ್ಲಜನಕ ತುಂಬಿದ ಟ್ಯಾಂಕರ್‌ ಕೇಂದ್ರಾಡಳಿತದ ಸರಹದ್ದಿನಲ್ಲಿ ಹಾದು ಹೋಗುವಾಗ ದೆಹಲಿ ಸರ್ಕಾರ ಲೂಟಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.