ADVERTISEMENT

ವೇಣುಗೋಪಾಲ್‌ ಧೂತ್‌ಗೆ ಮಧ್ಯಂತರ ಜಾಮೀನು

ಪಿಟಿಐ
Published 20 ಜನವರಿ 2023, 14:19 IST
Last Updated 20 ಜನವರಿ 2023, 14:19 IST
ವೇಣುಗೋಪಾಲ್‌ ಧೂತ್‌
ವೇಣುಗೋಪಾಲ್‌ ಧೂತ್‌   

ಮುಂಬೈ: ವಿಡಿಯೊಕಾನ್ ಸಮೂಹದ ಸಂಸ್ಥಾಪಕ ವೇಣುಗೋಪಾಲ್‌ ಧೂತ್‌ ಅವರಿಗೆ ಬಾಂಬೆ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಇದೇ ವೇಳೆ, ‘ಧೂತ್ ಅವರ ಬಂಧನಕ್ಕೆ ಸಿಬಿಐ ಉಲ್ಲೇಖಿಸಿರುವ ಕಾರಣಗಳು ಸಾಮಾನ್ಯವಾದದ್ದು ಮತ್ತು ಭೌತಿಕ ಆಧಾರವಿಲ್ಲದ್ದು’ ಎಂದು ಕೋರ್ಟ್‌ ಹೇಳಿದೆ.

ವಿಡಿಯೊಕಾನ್‌–ಐಸಿಐಸಿಐ ಬ್ಯಾಂಕ್‌ ಅಕ್ರಮವಾಗಿ ಸಾಲ ಮಂಜೂರು ಮಾಡಿದ ಆರೋಪದಡಿ ಡಿ.26ರಂದು ಸಿಬಿಐ ಅಧಿಕಾರಿಗಳು ಧೂತ್ ಅವರನ್ನು ಬಂಧಿಸಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು.

ADVERTISEMENT

ಇದೇ ಪ್ರಕರಣದಲ್ಲಿ ಜ.9ರಂದು ಐಸಿಐಸಿಐ ಬ್ಯಾಂಕ್‌ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್‌ ಹಾಗೂ ಅವರ ಪತಿ ದೀಪಕ್‌ ಕೊಚ್ಚರ್‌ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.