ADVERTISEMENT

ಬಿಜೆಪಿ ಸೇರಿದರೆ ಒಂದೇ ದಿನದಲ್ಲಿ ಜೈಲಿನಿಂದ ಕೇಜ್ರಿವಾಲ್ ಬಿಡುಗಡೆ: ಆತಿಶಿ

ಪಿಟಿಐ
Published 9 ಏಪ್ರಿಲ್ 2024, 3:00 IST
Last Updated 9 ಏಪ್ರಿಲ್ 2024, 3:00 IST
<div class="paragraphs"><p>ಆತಿಶಿ&nbsp;&nbsp;</p></div>

ಆತಿಶಿ  

   

ಡಿಬ್ರೂಗಢ (ಅಸ್ಸಾಂ): ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ಸೇರಿದರೆ ಒಂದೇ ದಿನದಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಎಎಪಿ ನಾಯಕಿ ಆತಿಶಿ ಹೇಳಿದರು. 

ಡಿಬ್ರೂಗಢ ಲೋಕಸಭಾ ಕ್ಷೇತ್ರದ ದುಲಿಯಾಜಾನ್‌ನಲ್ಲಿ ಸೋಮವಾರ ಎಎಪಿ ಅಭ್ಯರ್ಥಿಯ ಪ್ರಚಾರಕ್ಕಾಗಿ ನಡೆದ ರೋಡ್‌ ಶೋನಲ್ಲಿ ಅವರು ಮಾತನಾಡಿದರು. 

ADVERTISEMENT

‘ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಂತೆ ಕೇಜ್ರಿವಾಲ್ ಅವರೂ ಬಿಜೆಪಿ ಸೇರಿದರೆ ಒಂದೇ ದಿನದಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ. ಒಳ್ಳೆಯ ಶಾಲೆ–ಆಸ್ಪತ್ರೆಗಳನ್ನು ಕಟ್ಟಿಸಿರುವುದಕ್ಕೆ ಹಾಗೂ ದಿಟ್ಟತನದಿಂದ ಇರುವುದಕ್ಕೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.