ADVERTISEMENT

ಭಾರತ–ನೇಪಾಳ ನಡುವೆ ಬಸ್‌ ಸಂಚಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 8:01 IST
Last Updated 10 ನವೆಂಬರ್ 2021, 8:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಲಿಗುರಿ, ಪಶ್ಚಿಮ ಬಂಗಾಳ: ಕೋವಿಡ್‌ನಿಂದಾಗಿ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಪಶ್ಚಿಮ ಬಂಗಾಳದ ಸಿಲಿಗುರಿ ಮತ್ತು ನೇಪಾಳದ ಕಠ್ಮಂಡು ನಡುವಿನ ಬಸ್‌ ಸಂಚಾರ ಪುನರಾರಂಭವಾಗಿದೆ.

45 ಆಸನಗಳ ಬಸ್‌ ಮಂಗಳವಾರ ಮಧ್ಯಾಹ್ನಸಿಲಿಗುರಿಯಿಂದ ಕಠ್ಮಂಡುವಿಗೆ ಹೊರಟಿತು.ಎಲ್ಲಾ ಪ್ರಯಾಣಿಕರು ಲಸಿಕೆ ಪಡೆದಿರಬೇಕು, ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಕಠ್ಮಂಡುವಿನಿಂದ ಸಿಲಿಗುರಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಧ್ಯಾಹ್ನ 3 ಗಂಟೆಗೆ ಬಸ್‌ ಹೊರಡಲಿದೆ. ಟಿಕೆಟ್‌ ದರ ₹1,500 ನಿಗದಿಪಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.