ADVERTISEMENT

ಭಾರತವು ಇಸ್ರೇಲ್ ಮಾದರಿಯ ಭಯೋತ್ಪಾದನೆ ನಿಗ್ರಹ ತಂತ್ರ ಅಳವಡಿಸಿಕೊಳ್ಳಲಿ: ಸಿಟಿ ರವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2021, 14:55 IST
Last Updated 17 ಆಗಸ್ಟ್ 2021, 14:55 IST
ಸಿ.ಟಿ.ರವಿ
ಸಿ.ಟಿ.ರವಿ   

ಪಣಜಿ: ಭಾರತವು ಇಸ್ರೇಲ್‌ ಮಾದರಿಯ ಭಯೋತ್ಪಾದನೆ ನಿಗ್ರಹ ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಹೇಳಿದ್ದಾರೆ. ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ರವಿ, ʼದೇಶವನ್ನು ಭಯೋತ್ಪಾದಕ ಸಂಘಟನೆ ಹಿಡಿತಕ್ಕೆ ಪಡೆದುಕೊಂಡಿರುವುದು ನೋವಿನ ಸಂಗತಿʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ʼನನ್ನ ಪ್ರಕಾರ ನಾವು ಇಸ್ರೇಲ್‌ನ ಭಯೋತ್ಪಾದನೆ ನಿಗ್ರಹ ರಣತಂತ್ರವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ದೇಶ ಸುರಕ್ಷಿವಾಗಿರಲಿದೆ. ತಾಲಿಬಾನ್‌ ಸಂಘಟನೆ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.‌ ಅಷ್ಟಲ್ಲದೆ ಅವರು ಖಲಿಸ್ತಾನ ಬೆಂಬಲಿಗರನ್ನು ಪ್ರಚೋಧಿಸುವ ಸಾಧ್ಯತೆಯೂ ಇದೆ. ಆದರೆ, ಕೇಂದ್ರ ಸರ್ಕಾರವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ದೇಶದ ಸುರಕ್ಷತೆಯನ್ನು ಶೇ.100ರಷ್ಟು ಖಾತ್ರಿ ಪಡಿಸುತ್ತದೆʼ ಎಂದು ಭರವಸೆ ನೀಡಿದ್ದಾರೆ.

ADVERTISEMENT

ʼನಮ್ಮಲ್ಲಿ ಸಾಕಷ್ಟು ನುಸುಳುಕೋರರು ಮತ್ತು ದೇಶ ವಿರೋಧಿಶಕ್ತಿಗಳಿವೆ. ಅವನ್ನು ನಿಯಂತ್ರಿಸುವುದು ಸವಾಲಿನ ಸಂಗತಿ ಎಂದೂ ಹೇಳಿದ್ದಾರೆ.

ಭಾನುವಾರ ಕಾಬೂಲ್‌ ಪ್ರವೇಶಿಸಿರುವ ತಾಲಿಬಾನ್‌, ಅಧ್ಯಕ್ಷರ ಅರಮನೆಯನ್ನು ವಶಕ್ಕೆ ಪಡೆದಿದೆ. ಇದೀಗ ತಾಲಿಬಾನ್‌ ನಾಯಕರು ಅಫ್ಗಾನಿಸ್ತಾನಅಡಳಿತದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ಇವನ್ನೂ ಓದಿ
*
ʼಅಫ್ಗಾನಿಸ್ತಾನದ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್‌ ಹೋರಾಟʼ ಎಂದ ಎಸ್‌ಪಿ ಸಂಸದ
*ಅಫ್ಗನ್‌ನಲ್ಲಿ 20 ವರ್ಷಗಳ ಸುದೀರ್ಘ ರಕ್ತಸಿಕ್ತ ಅಧ್ಯಾಯ ಅಂತ್ಯಕ್ಕೆ ಬದ್ಧ: ಬೈಡನ್
*ಅಫ್ಗಾನಿಸ್ತಾನದಲ್ಲಿ ಅಮೆರಿಕದ ಪಾತ್ರವೇನು? ಇಲ್ಲಿದೆ 20 ವರ್ಷಗಳ ‘ರಕ್ತ ಚರಿತ್ರೆ’
​*
*
​*
*
​*
*
​*
*​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.