ADVERTISEMENT

'ಗಾಲ್ವನ್‌ ವೀರರಿಗೆ' ಗೀತ ನಮನ: ಸೇನೆಯಿಂದ ವಿಶೇಷ ವಿಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 16:12 IST
Last Updated 15 ಜೂನ್ 2021, 16:12 IST
ಗಾಲ್ವನ್‌ ವಿಡಿಯೊದಿಂದ ತೆಗೆಯಲಾಗಿರುವ ಸ್ಕ್ರೀನ್‌ ಶಾಟ್‌
ಗಾಲ್ವನ್‌ ವಿಡಿಯೊದಿಂದ ತೆಗೆಯಲಾಗಿರುವ ಸ್ಕ್ರೀನ್‌ ಶಾಟ್‌   

ನವದೆಹಲಿ: ಗಾಲ್ವನ್‌ ಕಣಿವೆಯಲ್ಲಿ ಚೀನಾ ಪಡೆಗಳ ಎದುರು ದಿಟ್ಟ ಹೋರಾಟ ನಡೆಸಿದ ಭಾರತೀಯ ಯೋಧರಿಗೆ ಭಾರತೀಯ ಸೇನೆಯು ಮಂಗಳವಾರ ವಿಶೇಷ ಗೀತೆಯ ಮೂಲಕ ನಮನ ಸಲ್ಲಿಸಿದೆ.

'ಗಾಲ್ವನ್‌ ಕೆ ವೀರ್‌' ಹೆಸರಿನಲ್ಲಿ ಗಾಲ್ವನ್‌ ವೀರ ಯೋಧರಿಗೆ ಗಾಯಕ ಹರಿಹರನ್‌ ಗೀತ ನಮನ ಸಲ್ಲಿಸಿದ್ದಾರೆ. ಕಳೆದ ವರ್ಷ ಜೂನ್‌ 15ರಂದು ಗಾಲ್ವನ್‌ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದರು.

ಅತ್ಯಂತ ಕಠಿಣ ಪರಿಸ್ಥಿತಿ, ಕಡಿದಾದ ಪ್ರದೇಶಗಳು ಹಾಗೂ ಪರ್ವತ ಪ್ರದೇಶಗಳಲ್ಲಿ ದೇಶದ ರಕ್ಷಣೆಗಾಗಿ ಸವಾಲುಗಳನ್ನು ಮೀರಿ ಮುನ್ನಡೆಯುವ ಸೈನಿಕರ 'ಸಾಹಸ ಯಾತ್ರೆ' ವಿಡಿಯೊದಲ್ಲಿ ದಾಖಲಾಗಿದೆ. 4ನಿಮಿಷ 59 ಸೆಕೆಂಡ್‌ಗಳಿರುವ ವಿಡಿಯೊವನ್ನು ಭಾರತೀಯ ಸೇನೆಯ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ.

ADVERTISEMENT

ಚೀನಾ ಯೋಧರೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್‌ ಬಿಕುಮಲ್ಲಾ ಸಂತೋಷ್‌ ಬಾಬು ಅವರಿಗೆ ಮರಣೋತ್ತರವಾಗಿ ಸೇನೆಯ ಎರಡನೇ ಅತಿ ಉನ್ನತ ಪ್ರಶಸ್ತಿಯಾದ ಮಹಾವೀರ ಚಕ್ರ, ಇತರ ನಾಲ್ಕು ಯೋಧರಿಗೂ ವೀರ ಚಕ್ರ ಪ್ರಶಸ್ತಿ ಘೋಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.