ADVERTISEMENT

ದುಬೈನಲ್ಲಿ ಸಿಲುಕಿದ್ದ ಭಾರತೀಯರು ತಾಯ್ನಾಡಿಗೆ    

ಪಿಟಿಐ
Published 3 ಜೂನ್ 2020, 20:00 IST
Last Updated 3 ಜೂನ್ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ದುಬೈನಲ್ಲಿ ಸಿಲುಕಿದ್ದ 153 ಮಂದಿ ಭಾರತೀಯ ರನ್ನು ಕರೆದುಕೊಂಡು ಬಂದ ವಿಮಾನವು ಮಂಗಳವಾರ ರಾತ್ರಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ಇದರಲ್ಲಿ ಪಂಜಾಬ್‌(80)‌, ಹಿಮಾಚಲ ಪ್ರದೇಶ(37), ಹರಿಯಾಣ (13), ಚಂಡೀಗಡ(11), ದೆಹಲಿ, ಜಮ್ಮು–ಕಾಶ್ಮೀರ (4) ಹಾಗೂ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ‌(2) ನಿವಾಸಿಗಳಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ‘ವಂದೇ ಭಾರತ್‌ ಮಿಷನ್‌’ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ತಾಯ್ನಾಡಿಗೆ ಕರೆತರುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.