ADVERTISEMENT

ಐಆರ್‌ಸಿಟಿಸಿ ಭ್ರಷ್ಟಾಚಾರ ಪ್ರಕರಣ: ಲಾಲು, ರಾಬ್ರಿ, ತೇಜಸ್ವಿ ಖುಲಾಸೆಗೆ ಮನವಿ

ಪಿಟಿಐ
Published 29 ಮಾರ್ಚ್ 2025, 13:38 IST
Last Updated 29 ಮಾರ್ಚ್ 2025, 13:38 IST
ಲಾಲು ಪ್ರಸಾದ್‌
ಲಾಲು ಪ್ರಸಾದ್‌   

ನವದೆಹಲಿ: ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‌ಸಿಟಿಸಿ)ಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಖುಲಾಸೆಗೊಳಿಸುವಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌, ಅವರ ಪತ್ನಿ ರಾಬ್ಡಿ ದೇವಿ ಮತ್ತು ಮಗ ತೇಜಸ್ವಿ ಯಾದವ್‌ ಅವರು ನ್ಯಾಯಾಲಯಕ್ಕೆ ಶನಿವಾರ ಮನವಿ ಮಾಡಿದ್ದಾರೆ.

‘ಸಿಬಿಐ ನಮ್ಮನ್ನು ಸುಮ್ಮನೆ ಆಯ್ಕೆ ಮಾಡಿದೆ, ನಮ್ಮ ವಿರುದ್ಧದ ಆರೋಪ ಸುಳ್ಳು’ ಎಂದು ಮೂವರೂ ಆರೋಪಿಗಳು ವಿಶೇಷ ನ್ಯಾಯಾಧೀಶರಾದ ವಿಶಾಲ್‌ ಗೋಗ್ನೆ ಅವರನ್ನು ಕೋರಿದ್ದಾರೆ.

‘ಐಆರ್‌ಸಿಟಿಸಿಗೆ ಸೇರಿದ ಹೋಟೆಲ್‌ನ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 2004ರಿಂದ 2014ರವರೆಗೆ ಇದರಲ್ಲಿ ಅಕ್ರಮ ನಡೆದಿದೆ. ಲಾಲು ಪ್ರಸಾದ್‌ ಮತ್ತು ಅವರ ಕುಟುಂಬಸ್ಥರು ಭ್ರಷ್ಟಾಚಾರ ನಡೆಸಿರುವುದಕ್ಕೆ ಸಾಕ್ಷ್ಯಗಳಿವೆ’ ಎಂದು ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

ADVERTISEMENT

ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.