ADVERTISEMENT

ಮೇಕ್ ಇನ್ ಇಂಡಿಯಾ ಹೋಗಿ ಈಗ ರೇಪ್ ಇನ್ ಇಂಡಿಯಾ ಆಗಿದೆ: ರಾಹುಲ್ ಗಾಂಧಿ 

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 10:41 IST
Last Updated 12 ಡಿಸೆಂಬರ್ 2019, 10:41 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಸಾಹಿಬ್‌ಗಂಜ್: ಬಿಜೆಪಿ ಸಂಸದರೊಬ್ಬರು ಯುವತಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಹತ್ಯೆ ಯತ್ನ ಮಾಡಿದ್ದರಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನೂ ಹೇಳಲಿಲ್ಲ. ಬಿಜೆಪಿಯ ಕೆಲವು ಸಂಸದರಿಂದ ನಮ್ಮಹೆಣ್ಣುಮಕ್ಕಳನ್ನು ಕಾಪಾಡಬೇಕಿದೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಅವರು ಚಂದ್ರನಲ್ಲಿಗೆ ರಾಕೆಟ್ ಕಳುಹಿಸಿದರು ಆದರೆ ಜನರಿಗೆ ಶುದ್ಧ ನೀರು ಪೂರೈಸಲಿಲ್ಲ, ರೈತರಿಗೆ ಸಹಾಯ ಮಾಡಲಿಲ್ಲ.

ಅಭಿವೃದ್ಧಿ ಕಾರ್ಯದ ಪರವಾಗಿಯೇ ಮೋದಿ ನಿಲ್ಲುವುದಾದರೆ, ಜಾರ್ಖಂಡ್ ರಾಜ್ಯದ ಅಭಿವೃದ್ದಿ ಮರೆತಿರುವಮುಖ್ಯಮಂತ್ರಿ ರಘುಬರ್ ದಾಸ್ ಅವರನ್ನು ಪ್ರಧಾನಿ ಯಾಕೆ ಟೀಕಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ರಾಹುಲ್ ಭಾಷಣದ ಮುಖ್ಯಾಂಶಗಳು
ನೋಟು ರದ್ಧತಿ ವೇಳೆ ಬಡಜನರು ಬ್ಯಾಂಕ್ ಮುಂದೆ ಸಾಲು ನಿಂತರು. ಆದರೆ ದೊಡ್ಡ ಉದ್ಯಮಿಗಳು ಕಪ್ಪು ಹಣವನ್ನು ಬಿಳಿ ಮಾಡುವಲ್ಲಿ ತೊಡಗಿದ್ದರು. ಅವರಿಗೆ ಈ ಅವಕಾಶ ನೀಡಿದ್ದು ಮೋದಿ.

ಜಾರ್ಖಂಡ್‌ನಲ್ಲಿ ಹಣದ ಕೊರತೆ ಇಲ್ಲ. ಆದರೆ ಅದು ಜನರಿಗೆ ತಲುಪುತ್ತಿಲ್ಲ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದರೆ ಆ ಹಣ ನಿಮಗೆ ತಲುಪುತ್ತದೆ.

ಮೋದಿ ದೇಶದಲ್ಲಿಭಯದ ವಾತಾವರಣ ಸೃಷ್ಟಿಸಿದ್ದಾರೆ. ದೇಶದ ಜನರು ದುರ್ಬಲ ಮತ್ತು ವಿಭಜನೆಗೊಂಡಿರಲಿ ಎಂದು ಅವರು ಬಯಸುತ್ತಾರೆ. ದೇಶದ ಜನರನ್ನು ಧರ್ಮ, ಜಾತಿ ಮತ್ತು ಪ್ರಾದೇಶಿಕವಾಗಿ ವಿಭಜಿಸಿದ ನಂತರವೇ ಮೋದಿ ಪ್ರಧಾನಿ ಸ್ಥಾನಕ್ಕೇರಿದ್ದು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.