ADVERTISEMENT

ಮಧ್ಯಪ್ರಾಚ್ಯ ದೇಶಗಳ ಸವಾಲು | ಶಾಂತಿ ಬಯಸುವವರಿಗೆ ನಮ್ಮ ಬೆಂಬಲ: ಜೈಶಂಕರ್‌

ಪಿಟಿಐ
Published 31 ಜನವರಿ 2026, 15:21 IST
Last Updated 31 ಜನವರಿ 2026, 15:21 IST
ಜೈಶಂಕರ್‌
ಜೈಶಂಕರ್‌   

ನವದೆಹಲಿ: ‘ಮಧ್ಯಪ್ರಾಚ್ಯ ದೇಶಗಳು ಬಹುಸ್ತರದ ಸವಾಲುಗಳನ್ನು ಎದುರಿಸುತ್ತಿವೆ. ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಯನ್ನು ಬೆಂಬಲಿಸುವವರಿಗೆ ನಮ್ಮ ಬೆಂಬಲ. ಗಾಜಾದಲ್ಲಿ ಯುದ್ಧ ನಿಲ್ಲಿಸುವುದೇ ನಮ್ಮೆಲ್ಲರ ಒಮ್ಮತದ ಆದ್ಯತೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಶನಿವಾರ ಅಭಿಪ್ರಾಯಪಟ್ಟರು.

ಭಾರತ–ಅರಬ್‌ ದೇಶಗಳ ವಿದೇಶಾಂಗ ಸಚಿವರ ಎರಡನೇ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿಯ ಸಭೆಯನ್ನು ಭಾರತವು ಆಯೋಜಿಸಿದೆ.

‘ವಿವಿಧ ಕಾರಣಗಳಿಂದ ವಿಶ್ವವು ರೂಪಾಂತರಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ನಾವು ಇಲ್ಲಿ ಸಭೆ ಸೇರಿದ್ದೇವೆ. ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾ ಪ್ರದೇಶಗಳಲ್ಲಿ ಕಳೆದ ವರ್ಷ ತೀವ್ರ ಬದಲಾವಣೆಗಳಾಗಿವೆ. ಇವೆಲ್ಲವೂ ನಮ್ಮೆಲ್ಲರ ಮೇಲೆಯೂ ಪರಿಣಾಮ ಬೀರುತ್ತವೆ. ಅರಬ್‌ ದೇಶಗಳು ಮತ್ತು ಭಾರತದ ಸಂಬಂಧದ ಮೇಲೆಯೂ ತುಸು ಪರಿಣಾಮ ಬೀರುತ್ತವೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.