ಕಾಂಚೀಪರಂ (ತಮಿಳುನಾಡು): ನಟ ಹಾಗೂ ಮಕ್ಕಳ ನೀಧಿ ಮಯಮ್ (ಎಂಎನ್ಎಂ) ಪಕ್ಷದ ನಾಯಕ ಕಮಲ ಹಾಸನ್
ಅವರ ಕಾರಿನ ಮೇಲೆ ಭಾನುವಾರ ರಾತ್ರಿ ಇಲ್ಲಿ ಯುವಕನೊಬ್ಬ ದಾಳಿ ನಡೆಸಿದ್ದಾನೆ.
ಚುನಾವಣಾ ಪ್ರಚಾರ ಮುಗಿಸಿ ಇಲ್ಲಿನ ಹೋಟೆಲ್ನತ್ತ ಬರುತ್ತಿದ್ದಾಗ ಈ ಘಟನೆ ನಡೆದಿದೆ.ದಾಳಿಯಲ್ಲಿ ಕಮಲ ಹಾಸನ್ ಅವರಿಗೆ ಯಾವುದೇ ಗಾಯವಾಗಿಲ್ಲ. ಆದರೆ ಕಾರಿನ ಮುಂಭಾಗದ ಗಾಜು ಪುಡಿಪುಡಿಯಾಗಿದೆ.
ಈ ಬಗ್ಗೆ ಪಕ್ಷದ ನಾಯಕ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಎ.ಜಿ.ಮೌರ್ಯ ಟ್ವೀಟ್ ಮಾಡಿದ್ದು, ಹಲ್ಲೆ ಯತ್ನವನ್ನು ಪೊಲೀಸರು ಯಶಸ್ವಿಯಾಗಿ ಹತ್ತಿಕ್ಕಿದ್ದಾರೆ, ಇಂತಹ ಶಕ್ತಿಗಳ ಬೆದರಿಕೆಗಳಿಗೆ ಪಕ್ಷ ಅಂಜುವುದಿಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.