ಮೊರೆನಾ: ಇದಕ್ಕೂ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಮಲನಾಥ್ ಅವರು ಈಗಿನ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಮೇಲೆ ₹ 8 ಸಾವಿರ ಕೋಟಿ ಸಾಲ ಹೊರಿಸಿದ್ದಾರೆ ಎಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಆರೋಪಿಸಿದ್ದಾರೆ.
15 ತಿಂಗಳು ಇದ್ದ ಈ ಹಿಂದಿನ ಸರ್ಕಾರವು, ಸಾಲಮನ್ನಾ ಮಾಡದೆ ರೈತರಿಗೂ ದ್ರೋಹ ಮಾಡಿದೆ ಎಂದು ಕಿಡಿ ಕಾರಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಧಿಯಾ, ‘ಯಾರಾದರೂ ಜನರಿಗೆ ಮೋಸ ಮಾಡಿದವರು ಇದ್ದರೆ, ಅದು ಕಮಲನಾಥ್ ಮತ್ತು ದಿಗ್ವಿಜಯ್ ಸಿಂಗ್ ಮಾತ್ರ. ಅವರು ಅಧಿಕಾರದಲ್ಲಿದ್ದ15 ತಿಂಗಳಲ್ಲಿಯೂ ರೈತರ ಸಾಲ ಮನ್ನಾ ಮಾಡಲಿಲ್ಲ. ₹ 8 ಸಾವಿರ ಕೋಟಿ ಮೊತ್ತದ ಸಾಲದ ಹೊರೆಯನ್ನು ಶಿವರಾಜ್ ಸಿಂಗ್ ಸರ್ಕಾರದ ಮೇಲೆ ಹೇರಿದ್ದಾರೆ’ ಎಂದು ಹೇಳಿದ್ದಾರೆ.
ಇದೇವೇಳೆ ಮುಖ್ಯಮಂತ್ರಿ ಚೌಹಾಣ್ ಅವರು, ಒಂದು ರೂಪಾಯಿಗೆ1ಕೆಜಿ ಗೋಧಿ ಖರೀದಿಸಲು ಸಾಧ್ಯವಾಗದ ಯಾವುದೇ ಜಾತಿ ಅಥವಾ ಸಮುದಾಯದ ಬಡವರು ಸೆಪ್ಟೆಂಬರ್ 16ರಿಂದ 1 ರೂಪಾಯಿಗೆ ಒಂದು ಕೆಜಿಗೋಧಿ ಖರೀದಿಸಲಿದ್ದಾರೆ. ಇನ್ನುಮುಂದೆ ಯಾವೊಬ್ಬ ಬಡವರೂ ಹಸಿವಿನಿಂದ ಬಳಲುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.