ಜಾರ್ಖಾಂಡ್(ಹಜಾರಿಬಾಗ್): ‘ಬಲವಾದ ಮತ್ತು ಸುಭದ್ರವಾದ ಸರ್ಕಾರಕ್ಕೆ ಕರ್ನಾಟಕದ ಜನ ಮತ್ತಷ್ಟು ಶಕ್ತಿ ತುಂಬಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ಕಾಂಗ್ರೆಸ್ ಮತ್ತು ಜೆಡಿಎಸ್ ನಮಗೆ ಇನ್ನೂಮೋಸ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಕರ್ನಾಟಕದ ಜನ ಬಿಜೆಪಿಗೆ ಮತ ಹಾಕುವ ಮೂಲಕ ತೋರಿಸಿದ್ದಾರೆ. ಅಸ್ಥಿರ ಸರ್ಕಾರ ರಚಿಸುವುದಕ್ಕೆಯಾವುದೇ ಅವಕಾಶವಿಲ್ಲ,’ ಎಂದು ಹೇಳಿದರು.
‘ರಾಜಕೀಯ ಸ್ಥಿರತೆ ಬಗ್ಗೆ ದೇಶ ಏನು ಯೋಚಿಸುತ್ತಿದೆ ಮತ್ತು ಅಂತಹ ಸ್ಥಿರತೆಗಾಗಿ ಬಿಜೆಪಿಯನ್ನು ಈ ಮಟ್ಟಿಗೆ ದೇಶ ನಂಬಿದೆ ಎನ್ನುವುದು ಕರ್ನಾಟಕ ಉಪಚುನಾವಣೆ ಫಲಿತಾಂಶದಿಂದ ತಿಳಿಯುತ್ತಿದೆ.ಈ ಫಲಿತಾಂಶ ನೀಡಿದ್ದಕ್ಕೆ ಕರ್ನಾಟಕದ ಜನತೆಗೆನನ್ನ ಕೃತಜ್ಞತೆಗಳು, ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.